ಚಿಕ್ಕಮಗಳೂರು:- ನೂರಕ್ಕೆ ನೂರರಷ್ಟು ಬೆಂಗಳೂರು ಗ್ರಾಮಾಂತರದಲ್ಲಿ ಸುರೇಶ್ ಗೆಲ್ಲಲ್ಲ ಎಂದು CT ರವಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋಲುತ್ತಿದ್ದಾರೆ ಮತ್ತು ಅವರ ಎಮೋಶನಲ್ ಸಹೋದರರು ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ರವಿ ಹೇಳಿದರು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವರು, ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸಿಡಿಸಿದವರು, ನೇಹಾಳನ್ನು ಕೊಂದವರು, ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ಮನೆಗಳಿಗೆ ಬೆಂಕಿಯಿಟ್ಟವರೆಲ್ಲ ಕಾಂಗ್ರೆಸ್ ನಾಯಕರ ಭಾವನಾತ್ಮಕ ಸಹೋದರು ಎಂದು ರವಿ ಹೇಳಿದರು. ನೇಹಾ ಹಿರೇಮಠ ಹತ್ಯೆ ವೈಯಕ್ತಿಕ ಕಾರಣಗಳಿಗೆ ಆಗಿದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಅಂತ ಮಾಧ್ಯಮದವರು ಹೇಳಿದಾಗ ರವಿ, ಸಿಎಂ ಹೇಳಿಕೆಗೆ ಕಾಂಗ್ರೆಸ್ ಕಾರ್ಪೋರೇಟರ್ ಅಗಿರುವ ನೇಹಾ ತಂದೆಯೇ ಉತ್ತರ ನೀಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ತಮಗೆ ತೋಚಿದ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಯಾಕೆಂದರೆ, ಈ ಘಟನೆ ಯಾರದ್ದೋ ಮನೆಯಲ್ಲಿ ನಡೆದಿದೆ, ಅವರ ಮನೆಗಳಲ್ಲಿ ನಡೆದಿದ್ದರೆ ಸಂಕಟ ಏನು ಅನ್ನೋದು ಅರ್ಥವಾಗುತಿತ್ತು ಎಂದು ರವಿ ಹೇಳಿದರು.