ಟಿ20 ವಿಶ್ವಕಪ್ ಆಡಲು ನೂರು ಪಟ್ಟು ಸಿದ್ಧನಿದ್ದೇನೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಇದನ್ನು ಮಾಡದಿದ್ದರೆ RCB ಕಪ್ ಗೆಲ್ಲುವುದಲಿರಲಿ, ಪ್ಲೇ ಆಫ್ ಗೆ ಹೋಗಲು ಆಗಲ್ಲ – ರಾಬಿನ್ ಉತ್ತಪ್ಪ!
ಆರ್ಸಿಬಿ ಗೆದ್ದಿರುವ ಏಕೈಕ ಪಂದ್ಯದಲ್ಲೂ ಕಾರ್ತಿಕ್ ಆಟವೇ ನಿರ್ಣಾಯಕವಾಗಿತ್ತು. ಹೀಗೆ ತಂಡದ ಪರ ಗೇಮ್ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿರುವ ದಿನೇಶ್ಗೆ ಮುಂಬರುವ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿದೆ. ಆದರೆ ಅದರ ಸಾಧ್ಯತೆಗಳು ತೀರ ಕಡಿಮೆ ಇವೆ.
ಇದೆಲ್ಲದರ ನಡುವೆ ಸ್ವತಃ ದಿನೇಶ್ ಕಾರ್ತಿಕ್ ಅವರೇ ಟಿ20 ವಿಶ್ವಕಪ್ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಇದು ನನ್ನ ಕೊನೆಯ ಐಪಿಎಲ್ ಎಂಬ ಸುಳಿವು ನೀಡಿದ್ದ ಕಾರ್ತಿಕ್, ನಿವೃತ್ತಿಯ ಬದುಕಿಗೆ ಅಡಿಗಾಲಿಟ್ಟಿದ್ದರು.
ಅಲ್ಲದೆ 2024 ರ ಟಿ20 ವಿಶ್ವಕಪ್ ಆಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಆದರೆ ಈಗ ಯು-ಟರ್ನ್ ತೆಗೆದುಕೊಂಡಿರುವ ಕಾರ್ತಿಕ್, ಆಯ್ಕೆಗಾರರು ಅವಕಾಶ ನೀಡಿದರೆ ವಿಶ್ವಕಪ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್, ‘ನನ್ನ ಜೀವನದ ಈ ಹಂತದಲ್ಲಿ ಭಾರತವನ್ನು ಪ್ರತಿನಿಧಿಸುವುದು ಶ್ರೇಷ್ಠ ಭಾವನೆಯಾಗಿದೆ. ನಾನು ಅದಕ್ಕೆ 100 ಪ್ರತಿಶತ ಸಿದ್ಧನಿದ್ದೇನೆ. ಟಿ20 ವಿಶ್ವಕಪ್ಗಾಗಿ ಆ ವಿಮಾನದಲ್ಲಿ ಹೋಗಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ ಎಂದಿದ್ದಾರೆ.
ಇನ್ನು ಈ ಆವೃತ್ತಿಯಲ್ಲಿ ಕಾರ್ತಿಕ್ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಆಡಿರುವ 7 ಪಂದ್ಯಗಳ 6 ಇನ್ನಿಂಗ್ಸ್ಗಳಲ್ಲಿ 75.33 ಸರಾಸರಿ ಮತ್ತು 205.45 ಸ್ಟ್ರೈಕ್ ರೇಟ್ನಲ್ಲಿ 226 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳೂ ಸೇರಿವೆ.