ಮೈಸೂರು :- ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ CBI ತನಿಖೆಗೆ ಆಗ್ರಹಿಸಿದ್ದ ಕುಮಾರಣ್ಣಗೆ ಸಿದ್ದಣ್ಣ ಪಂಚ್ ಕೊಟ್ಟಿದ್ದಾರೆ.
ಬಾಗಲಕೋಟೆ: ಬ್ರಹ್ಮಾನಂದ ಶಿವಯೋಗಿಗಳ ಪುಣ್ಯಾರಾಧನ ಮಹೋತ್ಸವ!
ತನಿಖೆಗಾಗಿ ತಾವು ಈಗಾಗಲೇ ಎಸ್ಐಟಿ ರಚಿಸಿಯಾಗಿದೆ, ರಾಜ್ಯ ಪೊಲೀಸ್ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ, ಅವರು ನಿಷ್ಪಕ್ಷಪಾತದಿಂದ ತನಿಖೆ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು. ಬಿಜೆಪಿಯರು 2013-2018 ರವರೆಗೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ ಅಂತ ಸಿದ್ದರಾಮಯ್ಯ ಹೇಳಿದಾಗ ಅವರ ಪಕ್ಕದಲ್ಲಿದ್ದ ಸಚಿವ ಹೆಚ್ ಸಿ ಮಹದೇವಪ್ಪ 2013-18ರಲ್ಲಿ ನಾವು ಅಧಿಕಾರದಲ್ಲಿದ್ದೆವು ಅನ್ನುತ್ತಾರೆ! ಸಿದ್ದರಾಮಯ್ಯ ಅವರ ಕಡೆ ನೋಡುತ್ತಾರೆಯೇ ಹೊರತು ತಮ್ಮ ವಾಕ್ಯವನ್ನು ಸರಿಪಡಿಸಲ್ಲ. ಮುಂದುವರಿದು ಮಾತಾಡುವ ಅವರ ಬಿಜೆಪಿ ಸಿಬಿಐಯನ್ನು ಕರಪ್ಷನ್ ಬ್ಯೂರೋ ಆಫ್ ಇಂಡಿಯ ಅಂತ ಕರೆದರೆ ದೇವೇಗೌಡರು, ಚೋರ್ ಬಚಾವೋ ಸಂಸ್ಥೆ ಎಂದಿದ್ದರು ಅಂತ ಹೇಳುವ ಮೂಲಕ HDK ಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ.