ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯರ
ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 48ನೇ ಹಾಗೂ ಸಿದ್ದೇಶ್ವರ ಶ್ರೀಗಳ 18ನೇ ಪುಣ್ಯಾರಾಧನ ಮಹೋತ್ಸವ
ಆಶ್ರಮದಲ್ಲಿ ಗುರುಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಜರುಗಿತು.
ತನ್ನಿಮಿತ್ಯ ಬೆಳಿಗ್ಗೆ 5ಗಂಟೆಗೆ ಬ್ರಹ್ಮಾನಂದ ಶಿವಯೋಗಿಗಳ ಕರ್ತೃ ಗದ್ದುಗೆಗೆ ಹಾಗೂ ಸಿದ್ದೇಶ್ವರ ಶ್ರೀಗಳ ಮೂರ್ತಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಆಚರಣೆಗಳು ನಡೆದವು.
7ಗಂಟೆಗೆ ವಿರಕ್ತಮಠದಿಂದ ಬ್ರಹ್ಮಾನಂದ ಆಶ್ರಮದವರೆಗೆ ಶಿವಯೋಗಿಗಳ ಮೂರ್ತಿ ಉತ್ಸವವು ಸಕಲ ವಾದ್ಯಮೇಳಗಳೊಂದಿಗೆ ನಡೆಯಿತು.
ಸಂಜೆ 6.30 ಘಂಟೆಗೆ ಆಧ್ಯಾತ್ಮ ವೇದಿಕೆಯಲ್ಲಿ ಹುಬ್ಬಳ್ಳಿ ಜಡಿಮಠದ ರಾಮಾನಂದ ಭಾರತಿ ಶ್ರೀ, ಸಂಶಿ ನಿರ್ಗುಣಾನಂದ ಶ್ರೀ, ಉಣಕಲ್ ಶಿವಾನಂದ ಸ್ವಾಮೀಜಿ ಮಾತನಾಡಿದರು.
ಹುಬ್ಬಳ್ಳಿ ಮೌನೇಶ ಬಡಿಗೇರ ಸಂಗಡಿಗರಿಂದ ಸಂಗೀತ ಸೇವೆ ಸಲ್ಲಿಸಿದ್ದಾರೆ.
ಬೆಳಿಗ್ಗೆ 9.30ಕ್ಕೆ ಪಲ್ಲಕ್ಕಿ ಸೇವೆ, ತದನಂತರ ಆಧ್ಯಾತ್ಮ ವೇದಿಕೆಯಲ್ಲಿ ಜಮಖಂಡಿ ಓಲಿಮಠದ ಡಾ.ಅಭಿನವಕುಮಾರ ಚನ್ನಬಸವ ಶ್ರೀ, ಜೋಡಕುರುಳಿಯ ಚಿದ್ಘನಾನಂದ ಶ್ರೀ, ಸಂಶಿ ವಿರಕ್ತಮಠದ ಚನ್ನಬಸವ ಶ್ರೀ ಪ್ರವಚನ ನೀಡಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ