ದಾವಣಗೆರೆ:- ಸಿದ್ದರಾಮಯ್ಯ ಮಾತಾಡುವಾಗ ಪ್ರಿಯಾಂಕ ಎಂಟ್ರಿ ಕೊಟ್ಟಿದ್ದು, ಈ ವೇಳೆ ಸಿಎಂ ಭಾಷಣ ನಿಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ “ಕೈ” ಅಭ್ಯರ್ಥಿಪರ ಹಣ ಹಂಚಿಕೆ: ಐವರು ಅರೆಸ್ಟ್..!
ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸಿ ಮಾತಾಡಿದರು. ಅವರು ಬರುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರದ ಭಾಷಣ ಮಾಡುತ್ತಿದ್ದರು. ಈ ವೇಳೆ ಪ್ರಿಯಾಂಕ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ದಾವಣಗೆರೆಯ ಮತದಾರರಿಗೆ ಯಾವ ಕಾರಣಕ್ಕೂ ಸ್ವತಂತ್ರ ಅಭ್ಯರ್ಥಿ ಪರ ಮತ ಚಲಾಯಿಸಬಾರದು, ಕಾಂಗ್ರೆಸ್ ಅಬ್ಯರ್ಥಿಯಾಗಿ ತಾನೇ ಸ್ಪರ್ಧಿಸುತ್ತಿರುವುದಾಗಿ ಭಾವಿಸಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ವೋಟು ನೀಡಬೇಕೆಂದು ಹೇಳುತ್ತಾರೆ. ಅವರು ಹಾಗೇ ಹೇಳುತ್ತಿರುವಾಗಲೇ ಪ್ರಿಯಾಂಕಾ ವೇದಿಕೆಗೆ ಆಗಮಿಸುತ್ತಾರೆ. ಬಿರುಬಿಸಿಲಲ್ಲೂ ಅವರು ಉತ್ಸಾಹದ ಚಿಲುಮೆಯಂತೆ ಕಾಣುತ್ತಾರೆ.
ನೆರೆದಿದ್ದ ಜನ ಕಿವಿಗಡಚಿಕ್ಕುವ ಚಪ್ಪಾಳೆ ಹಾಗೂ ಶಿಳ್ಳೆಯೊಂದಿಗೆ ಅವರನ್ನು ಸ್ವಾಗತಿಸುತ್ತಾರೆ. ಸಿದ್ದರಾಮಯ್ಯ ತಮ್ಮ ಭಾಷಣ ನಿಲ್ಲಿಸಿ ಅವರನ್ನು ಬರಮಾಡಿಕೊಳ್ಳುತ್ತಾರೆ. ವೇದಿಕೆಯ ಬಲಭಾಗದಲ್ಲಿ ಆಸೀನರಾಗಿದ್ದ ಡಿಕೆ ಶಿವಕುಮಾರ್ ಸಹ ಎದ್ದು ಬರುತ್ತಾರೆ.