ಬೆಂಗಳೂರು: ಎಸ್ಐಟಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಅವರು ಏನು ಮಾಡಲಿದ್ದಾರೆ ಎಂದು ನಾನು ಹೇಳಲು ಆಗಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಪ್ರಕರಣ ಸಂಬಂಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂಬ ಹೆಚ್ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಅವರಿಗೆ ಬೇಸರವಾಗಿದೆ. ಹಾಗಾಗಿ ಹಾಗೆ ಹೇಳುತ್ತಾರೆ.
ಆದರೆ ಎಸ್ಐಟಿ ಕಾನೂನಿನಂತೆ ಕ್ರಮ ಕೈಗೊಂಡಿದೆ. ಎಸ್ಐಟಿಯವರು ಒಂದು ವೇಳೆ ಕಾನೂನು ವಿರುದ್ಧವಾಗಿ ಹೋದರೆ ಅವರ ಮೇಲೂ ಆಪಾದನೆ ಬರುತ್ತದೆ. ಹಾಗಾಗಿ ಅವರು ಎಲ್ಲಾ ಎಚ್ಚರಿಕೆ ವಹಿಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು ಎಂದು ನಾವೂ ಸೂಚನೆ ನೀಡಿದ್ದೇವೆ ಎಂದರು.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ಎಸ್ಐಟಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಅವರು ಏನು ಮಾಡಲಿದ್ದಾರೆ ಎಂದು ನಾನು ಹೇಳಲು ಆಗಲ್ಲ. ಸಿಡಿ ಬಿಡುಗಡೆ ಯಾರು ಮಾಡಿದ್ದಾರೆ ಎಂಬ ಬಗ್ಗೆ ಎಸ್ಐಟಿಯವರೇ ಪರಿಶೀಲನೆ ನಡೆಸುತ್ತಾರೆ ಎಂದರು. ಕಾರು ಚಾಲಕ ಕಾರ್ತಿಕ್ ಎಲ್ಲಿದ್ದಾರೆ ಎಂಬುದು ಎಸ್ಐಟಿಯವರಿಗೆ ಮಾತ್ರ ಗೊತ್ತಿರುತ್ತೆ ಎಂದು ತಿಳಿಸಿದರು.