ತುಮಕೂರು :- ನಾನು ಜೈಲಿಂದ ಹೊರ ಬಂದ ದಿನವೇ ಸರ್ಕಾರ ಪತನವಾಗಲಿದೆ ಎಂಬ ದೇವರಾಜೇಗೌಡ ಹೇಳಿಕೆಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ
RCB V/S CSK ಹೈವೋಲ್ಟೋಜ್ ಮ್ಯಾಚ್.. ಟಾಸ್ ಗೆದ್ದ ಚೆನ್ನೈ ಬೌಲಿಂಗ್!
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ನಾಯಕರು ಹೇಳಿದ ಹಾಗೆ ನಾವು ಸರ್ಕಾರ ನಡೆಸಲಾಗಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ, ಬಿಜೆಪಿಯರು ಎಷ್ಟೇ ಪ್ರಯತ್ನಪಟ್ಟರೂ ಜನರ ನೆಮ್ಮದಿ ಹಾಳಾಗಲು ತಮ್ಮ ಸರ್ಕಾರ ಬಿಡಲ್ಲ ಎಂದು ಪರಮೇಶ್ವರ್ ಹೇಳಿದರು.
ದೇವರಾಜೇಗೌಡರು, ಡಿಕೆ ಶಿವಕುಮಾರ್ 100 ಕೋಟಿ ರೂ ಆಮಿಶವೊಡ್ಡಿದ ಬಗ್ಗೆ ಮಾತಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಆ ಅಂಶವನ್ನೂ ಎಸ್ಐಟಿ ತನ್ನ ತನಿಖೆಯಲ್ಲಿ ಸೇರಿಸಿಕೊಳ್ಳಲಿದೆ ಎಂದು ಹೇಳಿದರು. ತಾನು ಜೈಲಿಂದ ಹೊರಬಂದ ದಿನ ರಾಜ್ಯದಲ್ಲಿ ಕಾಂಗ್ರೆಸ್ ಪತನಗೊಳ್ಳುತ್ತದೆ ಎಂದು ದೇವರಾಜೇಗೌಡರು ಹೇಳಿರುವುದಕ್ಕೆ ಉತ್ತರಿಸಿದ ಗೃಹ ಸಚಿವ, ಹಾಗಾದರೆ ಅವರು ಜೈಲಲ್ಲೇ ಇರಲಿ ಎಂದು ನಗುತ್ತಾ ಹೇಳಿದರು
![](https://ainlivenews.com/wp-content/uploads/2024/01/Ad-Banner-copy-scaled.jpg)