ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಉದಯ ಗೌಡ ಆರೋಪ ಮಾಡಿದರು. 100 ಕೋಟಿ ಆಫರ್ ಕೊಡಲಾಗಿದೆ ಎಂದು ಡಿಕೆ ಶಿವಕುಮಾರ್ ಹಾಗೂ ಇತರ ಸಚಿವರ ವಿರುದ್ಧ ವಕೀಲ ದೇವರಾಜೇಗೌಡ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
House Fly: ಮನೆಯಲ್ಲಿ ನೊಣಗಳ ಕಾಟದಿಂದ ಬೇಸತ್ತಿದ್ದೀರಾ..? ಈ ಟ್ರಿಕ್ ಬಳಸಿ ಅವುಗಳನ್ನು ಓಡಿಸಿ!
ದೇವರಾಜೇಗೌಡ ಕುಮಾರಸ್ವಾಮಿ ಕೃಪಪೋಷಿತ ನಾಟಕ ಮಂಡಳಿಯ ಒಬ್ಬ ಸದಸ್ಯ. ನೂರು ಕೋಟಿ ಆಫರ್ ಕೊಟ್ಟಿದ್ರೆ ಇಷ್ಣು ದಿನ ಏನು ಬಾಯಿಗೆ ಮಣ್ಣು ತುಂಬಿಕೊಂಡಿದ್ದನಾ? ಎಂದು ಪ್ರಶ್ನಿಸಿದರು. ಜೈಲಿಗೆ ಹೋದಮೇಲೆ ಯಾಕೆ ಈ ವಿಚಾರ ಹೇಳಬೇಕಿತ್ತು? ಅಷ್ಷು ಸಾಚಾ ಇದ್ದ ಮೇಲೆ ಅವನು 100 ಕೋಟಿ ಆಫರ್ ಮಾಡಿದಾಗಲೇ ಕಂಪ್ಲೇಟ್ ಮಾಡಬಹುದಿತ್ತು. ಅವನಿಗೆ ತಿಳುವಳಿಕೆ ಇಲ್ವವೇ ಎಂದು ಗರಂ ಆದರು.
![](https://ainlivenews.com/wp-content/uploads/2024/01/Ad-Banner-copy-scaled.jpg)