ದಾವಣಗೆರೆ: ”ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳ ಕಾಲ ದೇಶದಾದ್ಯಂತ ಮಾಡಿರುವ ಕೆಲಸ ಕಾರ್ಯಗಳು, ಈ ಹಿಂದಿನ ಮೈಸೂರು ಮಹಾಸಂಸ್ಥಾನದ ಆಡಳಿತದ ಪ್ರತಿಧ್ವನಿ,” ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಈ ವೇಳೆ ಕೆಬಿ ಬಡಾವಣೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ”ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರಕಾರದ ಆಡಳಿತ ನೋಡುತ್ತಿದ್ದರೆ, ಮೈಸೂರು ಅರಸರ ಆಡಳಿತದ ದಿನಗಳೇ ಕಣ್ಮುಂದೆ ಬಂದಂತಾಗುತ್ತದೆ,” ಎಂದರು.”ಅಂದಿನ ಕಾಲದಲ್ಲಿ ಆಧುನಿಕತೆಗೆ ಅನುಗುಣವಾಗಿ ಏನೇನು ಅಭಿವೃದ್ಧಿ ಆಗಬೇಕಿತ್ತೋ ಅವೆಲ್ಲವನ್ನೂ ಮೈಸೂರು ಅರಸರು ಮಾಡಿದರು.
Car airbags: ನಿಮ್ಮ ಕಾರಿನಲ್ಲಿರುವ ಏರ್ʼಬ್ಯಾಗ್ ಅಸಲಿಯೋ, ನಕಲಿಯೋ ತಿಳಿಯುವುದೇಗೆ ಗೊತ್ತಾ..? ಈ ಸ್ಟೋರಿ ನೋಡಿ
ಮೈಸೂರು ಸಿಲ್ಕ್, ಮೈಸೂರ್ ಸಿಮೆಂಟ್, ಮೈಸೂರು ಸ್ಟೀಲ್, ಮೈಸೂರು ಸೋಪ್ ಸೇರಿ ಅನೇಕ ಬ್ರಾಂಡ್ ಸೃಷ್ಟಿಸುವ ಮೂಲಕ ಮೈಸೂರು ಸಂಸ್ಥಾನವನ್ನು ಒಂದು ಬ್ರಾಂಡ್ ಆಗಿ ಬೆಳೆಸಿ, ನಿಲ್ಲಿಸಿದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಕೂಡ ಮೇಕ್ ಇನ್ ಇಂಡಿಯಾ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ,” ಎಂದು ಹೇಳಿದರು.