ಬಾಗಲಕೋಟೆ: ನಮ್ಮ ಮಾತು ಇನ್ನೊಬ್ಬರಿಗೆ ಹಿತವೆನಿಸಬೇಕು. ಪ್ರೀತಿ ತುಂಬಿರಬೇಕು ಎಂದು ರಬಕವಿಯ ವಿನೋದ ಮಾತುಗಾರ ಮೃತ್ಯುಂಜಯ ರಾಮದುರ್ಗ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕುಂಬಾರ ಓಣಿಯಲ್ಲಿರುವ ಜೀವನ ಮುಕ್ತ ಪರಪ್ಪ ಮನ್ಮಿ ನಿವಾಸದಲ್ಲಿ 87ನೇ ಹನುಮ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನಕ್ಕಿಂತ ಸಂಸ್ಕಾರ ದೊಡ್ಡದು. ಇನ್ನೊಬ್ಬರಿಗೆ ಕೇಡಾಗದ ರೀತಿ ನಾವು ಇರಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಬ್ರಹ್ಮಾನಂದ ಆಶ್ರಮದ ಅರ್ಚಕ ಮಲ್ಲಯ್ಯ ಗಂಗಯ್ಯ ಮಠಪತಿ ವಹಿಸಿ ವಚನಕಾರರ ಶ್ರೇಷ್ಠ ಜೀವನ ಅರಿಯಬೇಕು ಎಂದರು. ರಬಕವಿ-ಬನಹಟ್ಟಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಮ. ಕೃ. ಮೇಗಾಡಿ, ಯುವ ಸಂಘಟಕ ಮೇಲು ಅಮಲಜೇರಿ, ಇಂದುಧರ ಬೆಳಗಲಿ, ಪತ್ರಕರ್ತ ಪ್ರಕಾಶ ಕುಂಬಾರ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿ ಮನುಷ್ಯನಲ್ಲಿ ದಯೆ, ಕರುಣೆ, ಅಂತಃಕರಣ, ಸದ್ಭಾವ ಗುಣಗಳು ಸತ್ಸಂಗದಿಂದ ಬೆಳೆಯುತ್ತವೆ.
ರೀತಿ, ನೀತಿ ನಿಯತ್ತು ಸಕಾರಾತ್ಮಕ ವಿಚಾರಗಳು ಬದುಕನ್ನು ಸುಂದರಗೊಳಿಸುತ್ತವೆ ಎಂದರು. ಇದೇ ಸಂದರ್ಭದಲ್ಲಿ ಬುದ್ದಪ್ಪಾ ಕುಂದಗೋಳ, ಈರಪ್ಪ ಮನ್ಮಿ. ಕಲಾವಿದ ಶಂಕರ ಜಂಬಗಿ. ಶಿವಾನಂದ ಗುಂಡಕಲ್ಲಮಠ. ಪ್ರಭು ಮನವಾಡೆ. ಪ್ರಕಾಶ ಮನ್ಮಿ. ರಬಕವಿಯ ಶ್ರೀ ಪ್ರಭುಲಿಂಗ ಭಜನಾ ಮಂಡಳಿ, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ, ಹೊಸೂರಿನ ಶ್ರೀ ಶಂಕರಾನಂದ ಭಜನಾ ಮಂಡಳಿ ಕಲಾವಿದರು ಭಕ್ತಿ ಸಂಗೀತ ಸೇವೆಗೈದರು.
ಪ್ರಕಾಶ ಕುಂಬಾರ
ಬಾಗಲಕೋಟೆ