ಮಂಗಳೂರು:- ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ. ಒಬ್ಬ ಹುಡುಗಿಯನ್ನ ಹೀಗೆ ಹತ್ಯೆಗೈಯೋದು ಯಾರೂ ಒಪ್ಪಲ್ಲ. ಗೃಹಸಚಿವರ ಭಾಷೆಯನ್ನ ನಾಗರಿಕ ಸಮಾಜದಲ್ಲಿ ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ.
ನೀರು ವಿಚಾರವಾಗಿ ಕಿರಿಕ್: ವಾಟರ್ ಮ್ಯಾನ್, ಗ್ರಾ.ಪಂ ಸದಸ್ಯ ಮೇಲೆ ಹಲ್ಲೆ!
ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ವೋಟರ್ ಲಿಸ್ಟ್ನಿಂದ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರು ಕೈಬಿಡಲಾಗಿದೆ. ಜಾಣ್ಮೆಯಿಂದ ಮತದಾರರ ಲಿಸ್ಟ್ನಿಂದ ಹೆಸರು ಕೈಬಿಟ್ಟಿದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇದ್ದರೆ ಹೆಂಡತಿ ಹೆಸರು ಔಟ್. ಒಂದು ಬೂತ್ನಲ್ಲಿ 20-25 ಮತದಾರರ ಹೆಸರು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಿಳುನಾಡು ಪೂರ್ತಿ ಈ ಅಕ್ರಮದ ಬಗ್ಗೆ ಮಾಹಿತಿ ಕಲೆ ಹಾಕಿ ಚುನಾವಣಾ ಆಯೋಗಕ್ಕೂ ಪತ್ರದ ಮೂಲಕ ತಿಳಿಸುತ್ತೇವೆ. ವ್ಯವಸ್ಥಿತವಾಗಿ ಈ ಕೃತ್ಯ ನಡೆಸಿದ್ದಾರೆ. ನಾವು ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಜಾಹೀರಾತಿನಲ್ಲಿ ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ ಎಂಬ ಪ್ರಶ್ನೆ ವಿಚಾರವಾಗಿ ಮಾತನಾಡಿದ್ದು, ಕರ್ನಾಟಕ, ತಮಿಳುನಾಡು ಜನ ಸಹೋದರ, ಸಹೋದರಿಯರು. ಕರ್ನಾಟಕದ ಸಾವಿರಾರು ಜನ ತಮಿಳುನಾಡಲ್ಲಿ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿದ ಸಾವಿರಾರು ಜನ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 100 ಪರ್ಸೆಂಟ್ ನೀರಿನ ಸಮಸ್ಯೆ ಇರುವುದು ನಿಜ. ದ್ವೇಷದ ಭಾವನೆ ಬಿಟ್ಟು ಎಲ್ಲಾ ರಾಜ್ಯದವರು ಚೆನ್ನಾಗಿರಬೇಕೆಂದು ಬಯಸಬೇಕು ಎಂದಿದ್ದಾರೆ.