ಹುಬ್ಬಳ್ಳಿ:– ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಸಂತ ಬಂಗೇರಾ (79) ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗ್ಲೋಬಲ್ ಮಿಡಿಯಾ ಹಾಗೂ ಕಮೀನಿಕೇಷನ್ ಸಂಸ್ಥೆ ಮುಖ್ಯಸ್ಥ ದಿನೇಶ ಶೆಟ್ಡಿ, ಸುಳ್ಳಾ ತಾಲೂಕುಮಹಿಳಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಶಶಿಕಲಾ ಶೆಟ್ಟಿ ಹಾಗೂ ಅನೇಕರು ಸಂತಾಪ ಸೂಚಿಸಿ
IPL 2024: ಇಂದು SRH vs LSG ಬಿಗ್ ಫೈಟ್… RCB ಗೆ ಯಾರು ಗೆದ್ದರೆ ಒಳ್ಳೆಯದು..!
ವಸಂತಾ ಬಂಗೇರಾ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಜನಾನುರಾಗಿಯಾಗಿದ್ದರು ನೇರ ನಡೆ ನುಡಿಯ ಜನ ಸಾಮಾನ್ಯರ ನಡುವೆ ರಾಜಕಾರಣಿಯೊಬ್ಬರ ಬಗ್ಗೆ ದಂತ ಕತೆಗಳು ಸೃಷ್ಟಿಯಾಗಿದ್ದರೆ ಅದು ವಸಂತ ಬಂಗೇರ ಅವರ ಬಗ್ಗೆ ಮಾತ್ರ ಸಲ್ಲುತ್ತದೆ.
ಬಂಗೇರ ಅವರ ಸಿಟ್ಟು, ಸರಕಾರಿ ಕಚೇರಿಯಲ್ಲಿ ಕೆಲಸ ಮಾಡಿಸುವ ಛಾತಿ, ಅಧಿಕಾರಿಗಳನ್ನು ಮೇಲೆ ಕೆಳಗೆ ಮಾಡುವ ಅವರ ತಾಕತ್ತು, ಬಡವರ ಬಗೆಗಿನ ಕಾಳಜಿ, ಬಂಗೇರಾ ಅವರ ಮಾನವೀಯ ಮೌಲ್ಯದ ಗುಣಗಳು ಮೆಚ್ಚುಗಿಗೆ ಪಾತ್ರವಾಗಿದೆ ಎಂದಿದ್ದಾರೆ