ಬಾಗಲಕೋಟೆ:- ಬಾಗಲಕೋಟೆಯಲ್ಲಿ ಮುಸ್ಲಿಂ ಯುವತಿಯನ್ನು ಹಿಂದೂ ಯುವಕ ಮದುವೆ ಆಗಿರುವ ಹಿನ್ನೆಲೆ ಹಿಂದೂಪರ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ.
Bengaluru weather: ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಮಳೆ ನಿರೀಕ್ಷೆ..!
ಮಾಂತೇಶ್ ಮತ್ತು ರುಬಿನಾ ಮದುವೆಯಾದ ಜೋಡಿ ಎನ್ನಲಾಗಿದೆ. ಮದುವೆ ಬಳಿಕ ಜೋಡಿ ರಕ್ಷಣೆ ಕೋರಿ ಎಸ್ಪಿಗೆ ಪತ್ರ ಬರೆದು, ನಗರದ ಎಸ್ಪಿ ಕಚೇರಿಗೆ ಬಂದಿದ್ದರು. ಆದರೆ ಮದುವೆಯಾದ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು (Hindu Organizations Activist) ಪೊಲೀಸ್ ಠಾಣೆಯ ಬಳಿ ಆಗಮಿಸಿದ್ದರು. ಎಸ್ಪಿ ಕಚೇರಿಗೆ ಆಗಮಿಸಿದ ವೇಳೆ ಮದುವೆಗೆ ಸೂಕ್ತ ಸ್ಪಂದನ ಸಿಕ್ಕಿಲ್ಲ ಅಂತ ಆರೋಪಿಸಿರುವ ಹಿಂಜಾವೇ ಮುಖಂಡರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.