ಬಳ್ಳಾರಿ: ಬಳ್ಳಾರಿ ತಾಲೂಕಿನ ಕೃಷ್ಣಾನಗರವನ್ನು ಕಂದಾಯ ಗ್ರಾಮವನ್ನು ಮಾಡುವಂತೆ ಗ್ರಾಮಸ್ಥರು ಜಿಲ್ಲಾಡಳಿತ ವಿರುದ್ದ ಪ್ರತಿಭಟನೆ ಮಾಡಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದರು.. ಕೃಷ್ಣಾ ನಗರದಲ್ಲಿ 2500 ಜನ ವಾಸ ಮಾಡುತ್ತಿದ್ದು,1700 ಕ್ಕು ಹೆಚ್ಚು ಮತದಾರರರಿದ್ದಾರೆ.
ಆದರೆ ಗ್ರಾಮದಲ್ಲಿರುವ ಜನರ ಹೆಸರಿನಲ್ಲಿರುವ ಜಾಗದಲ್ಲಿ 2ಇ ಸರ್ಕಾರ ಅಂತ ಪಹಣಿಯಲ್ಲಿ ಉಲ್ಲೆಖಗೊಂಡಿದೆ.ಖಾಸಗಿ ಜಾಗಕ್ಕೂ ಕೂಡ ಕರ್ನಾಟಕ ಸರ್ಕಾರ ಅಂತ ನಮೂದಾಗಿದೆ.ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯ ಗೇಟ್ ಗೆ ಲೋಕಸಭಾ ಎಲೆಕ್ಷನ್ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು..
ಕಂದಾಯ ಗ್ರಾಮಕ್ಕಾಗಿ ಹಲುವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಯಾವುದೆ ಕ್ರಮಕೈಗೊಂಡಿಲ್ಲ..ಇದರಿಂದ ಆಕ್ರೋಶ ಗೊಂಡು ಕಂದಾಯ ಗ್ರಾಮ ಮಾಡುವವರೆಗು ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಇಡಿದಿದ್ದಾರೆ.