ಚಾಮರಾಜನಗರ:- ಇಲ್ಲಿನ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಕಾಂಗ್ರೆಸ್ ಮಾದ್ಯಮ ಸಂಯೋಜಕ ಕೆರಹಳ್ಳಿ ನವೀನ್ ಹೇಳಿಕೆ ನೀಡಿದ್ದಾರೆ.
ಬಂಡೀಪುರದಲ್ಲಿ ಪ್ರವಾಸಿಗರಿಗೆ ದರ್ಶನ ತೋರುತ್ತಿರುವ ಹುಲಿಗಳು..!
ಚಾಮರಾಜನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ 1 ಲಕ್ಷ ಅಂತರದಿಂದ ಗೆಲುವು ಸಾಧ್ಯ. ಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಗೆಲುವು ವರದಾನ. ಇಂಡಿಯಾ ಪ್ರಣಾಳಿಕೆ ಕೈ ಹಿಡಿದಿದೆ. 8 ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಮಹಿಳೆಯರಿಂದ ಹೆಚ್ಚು ಮತದಾನವಾಗಿದೆ.
ಕರ್ನಾಟಕದ 14 ಲೋಕಸಭಾ ಚುನಾವಣೆಯಲ್ಲಿ 10 ಲೋಕಸಭಾ ಕಾಂಗ್ರೆಸ್ ವಶಕ್ಕೆ ಬರಲಿದೆ. ರಾಜ್ಯದಲ್ಲಿ ಭೀಕರ ಬರಗಾಲದಲ್ಲಿ ಸೆಪ್ಟೆಂಬರ್ ತಿಂಗಳು ಬರ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿತ್ತು. ಉಳಿದ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಭೀಕರ ಬರಗಾಲ ಆವರಿಸಿದೆ. ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಹೆಚ್ಚು ಅನುದಾನಕ್ಕಾಗಿ ಶೀಘ್ರದಲ್ಲಿಯೆ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೆರಹಳ್ಳಿ ನವೀನ್ ಹೇಳಿಕೆ ನೀಡಿದ್ದಾರೆ.