ಚಾಮರಾಜನಗರ:- ಜಿಲ್ಲೆಯ ಬಂಡೀಪುರದಲ್ಲಿ ಹುಲಿ ದರ್ಶನವಾಗುತ್ತಿದೆ. ಬೇಸಿಗೆ ಬಿಸಿಲ ಝಳದಿಂದ ತಂಪಾಗಿಸಿಕೊಳ್ಲಲು ನೀರಿನತ್ತ ಹುಲಿಗಳು ಬರುತ್ತಿವೆ.
Ballari: ಮದುವೆ ದಿಬ್ಬಣದ ಲಾರಿ ಪಲ್ಟಿ.. ಇಬ್ಬರು ಸಾವು..!
ಬಂಡೀಪುರ ಹುಲಿ ಯೋಜನೆಯ ಸಫಾರಿ ವಲಯದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಕೆರೆಗಳತ್ತ ಹುಲಿಗಳು ದಾವಿಸುತ್ತಿವೆ. ಹುಲಿಗಳು ಕಳೆದ ಒಂದು ತಿಂಗಳಿಂದ ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ. ಸಫಾರಿಗೆ ಹೋಗಿದ್ದ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಬಂಡೀಪುರದ ತಾವರೆಗಟ್ಟೆ ಬಳಿಯ ಮಹದೇಶ್ವರ ದೇವಾಲಯದ ಬಳಿ ದರ್ಶನ ತೋರಿದ್ದು, ಗಾಂಭೀರ್ಯದಿಂದ ಹುಲಿರಾಯ ಹೆಜ್ಜೆ ಹಾಕಿದ್ದಾನೆ. ಬೇಸಿಗೆ ಹಿನ್ನಲೆ ಹಾಗೂ ಸರಣಿ ರಜಾ ಹಿನ್ನಲೆ ಹೆಚ್ಚಿನ ಸಂಖ್ಯೆಯಲ್ಲಿ ಬಂಡೀಪುರದತ್ತ ಪ್ರವಾಸಿಗರು ಲಗ್ಗೆ ಹಾಕ್ತಿದ್ದಾರೆ.
ಬಂಡೀಪುರ ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಹುಲಿ ಸಂರಕ್ಷಿತ ಅರಣ್ಯ ಎಂದು ಹೇಳಲಾಗಿದೆ.