ಕೋಲಾರ: ಗ್ಯಾಂರಂಟಿ ಅನುಷ್ಟಾನ ಮಾಡೋದಕ್ಕೆ ಕರ್ನಾಟದಲ್ಲಿ ಸಾದ್ಯ ಇಲ್ಲ ಎಂದು ಕೋಲಾರದಲ್ಲಿ ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಆರ್.ಬಿ.ಐ ಗವರ್ನರ್ ಗಳನ್ನ ಅರ್ಥಶಾಸ್ತ್ರಜ್ಞರನ್ನ ಮಾತನಾಡಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಆರ್ಥಿಕ ನಿರ್ವಹಣೆ ಎಲ್ಲಾ ವಿಚಾರಗಳನ್ನ ಗಮನದಲ್ಲಿ ಇರಿಸಿಕೊಂಡು ಮಾಡಲಾಗುತ್ತಿದೆ. ಈಗ ಕೇಂದ್ರದ್ದೂ ಹಾಗೆಯೇ ಹೇಳುತ್ತಿದ್ದಾರೆ ಎಂದರು.
ಇನ್ನೂ ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ ವಿಚಾರಕ್ಕೆ ಪ್ರತಿಕ್ತಿಯೇ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಬರಬಹುದು. ಭ್ರಷ್ಟ ಮಂತ್ರಿಯನ್ನ ಸಮರ್ಥನೆ ಮಾಡಿಕೊಳ್ಳಲು ಮೋದಿ ಬರ್ತಿದಾರೆ ಸಂತೋಷ, ಕೋವಿಡ್ ವೇಳೆ ಬಡವರ ರಕ್ತ ಹೀರಿರುವವರು, ಅವರು ಕಣ್ಣಿರು ಹಾಕಿರುವುದು ಸಹ ನಾಟಕ ಎಂದರು.
ಇನ್ನೂ ಸಂತ್ರಸ್ತರ ಶಾಪ ಅವರಿಗೆ ತಟ್ಟುತ್ತದೆ. ಎಲ್ಲಾ ದಾಖಲೆಗಳು ಜಸ್ಟೀಸ್ ಹತ್ತಿರ ಇದೆ. ಅವರು ಯಾವ ಜಾತಿ ಜನಾಂಗದವರನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಒಕ್ಕಲಿಗರ ಕಾರ್ಡ್ ನ ಬಳಕೆ ಮಾಡಲು ಅರ್ಹರಿಲ್ಲ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದರು.