ಹುಬ್ಬಳ್ಳಿ: ನಗರದ ಬಿವಿಬಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ ಇಂದು ಹುಬ್ಬಳ್ಳಿಯಲ್ಲಿ ಜೈ ಭೀಮ ಯುವ ಶಕ್ತಿ ಸೇನಾ ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
UIDAI Recruitment: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿದೆ ಬಂಪರ್ ಉದ್ಯೋಗಾವಕಾಶ..! ತಿಂಗಳಿಗೆ 35,000 ಸಂಬಳ
ನಗರದ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ ಸಂಘಟನೆಯ ಪಧಾದಿಕಾರಿಗಳು, ನೇಹಾ ಹತ್ಯೆ ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಹತ್ಯೆಮಾಡಿದ ಆರೋಪಿಗೆ ಯಾವೂದೇ ಮುಲಾಜಿಲ್ಲದೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು ಆರೋಪಿಯ ಕುರಿತಾಗಿ ಯಾವೂದೇ ಮುಲಾಜಿಗೆ ಒಳಗಾಗದೇ ಗಲ್ಲಿಗೇರಿಸಬೇಕು ಅಥವಾ ಎನ್ಕೌಂಟ್ ಮಾಡಬೇಕು ಎಂದು ಆಕ್ರೋಶಿತರಾಗಿ ಒತ್ತಾಯಿಸಿದರು.
ಪೊಲೀಸ್ ಕಮೀಷನರ್ ಮನವಿ
ನಂತರ ನವನಗರದಲ್ಲಿನ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಅವರ ಮೂಲಕ ಸಹ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಸುನೀಲ್ ಕುರ್ಡೇಕರ್, ಮುಖಂಡರಾದ ರಮೇಶ್ ಹಿರೇಮನಿ, ಸತೀಶ್ ಮಿಶ್ರಿಕೋಟಿ, ಗುರುನಾಥ ಮೊರಬದ್, ವಿನಯ್ ಅಬೀಬ್, ಮಂಜು ಉಪ್ಪಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.