ಕೃಷಿ ನಮ್ಮ ದೇಶದಲ್ಲಿ ಬಹು ಅಮೂಲ್ಯ ಸ್ಥಾನವನ್ನು ಪಡೆದಿದೆ. ಕೃಷಿಗೆ ಸಂಬಂಧ ಪಟ್ಟಂತೆ ಅನೇಕ ಕೆಲಸ ಕಾರ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಥೇಚ್ಛವಾಗಿ ಉತ್ತೇಜನೆಯನ್ನು ನೀಡುತ್ತಿದ್ದು ಅದಪತನ ವಾದ ಕೃಷಿ ಚಟುವಟಿಕೆಗೆ ಈಗ ಮತ್ತೆ ಭರವಸೆ ಆಶಾ ಕಿರಣ ಮೂಡುತ್ತಿದೆ. ಕೃಷಿ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ಯೋಜನೆ, ಸಹಾಯಧನ, ಕೊಡುಗೆ ವಿತರಣೆ ಮಾಡುತ್ತಿದ್ದು ಅಂತಹ ಕೊಡುಗೆಯಲ್ಲಿ ಹೊಸತೊಂದು ಸೇರ್ಪಡೆ ಆದ ಬಗ್ಗೆ ಇಲ್ಲಿದೆ ಮಾಹಿತಿ
ರೈತರೇ ನಿಮಗಿದು ಗುಡ್ ನ್ಯೂಸ್: ಮೊಬೈಲ್ ನಲ್ಲಿ ಪೋಡಿ ನಕ್ಷೆ ಪಡೆಯುವುದೇಗೆ? ಇಲ್ಲಿದೆ
ಳ್ಳಿಗಳೆಲ್ಲ ಮಾಯವಾಗಿ ಪಟ್ಟಣವಾಗಿ ಬೆಳೆಯುತ್ತಿದೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದ ಕುಟುಂಬ ಪಟ್ಟಣದ ಶೈಲಿಯ ಬದುಕಿಗೆ ಒಗ್ಗಿಕೊಂಡಿದ್ದು ಕೃಷಿ ಚಟುವಟಿಕೆ ಮೂಲೆ ಗುಂಪಾಗುತ್ತಿದೆ ಹಾಗಾಗಿ ಸೂಕ್ತ ಪ್ರೋತ್ಸಾಹ ತುಂಬಾ ಅಗತ್ಯವಾಗಿದೆ. ಈಗಾಗಲೇ ಕೃಷಿ ಬಗ್ಗೆ ಜನರಿಗೆ ಅರಿವು ಮೂಡಿಸುವ ಪರಿಕಲ್ಪನೆ ಮಾಡಲಾಗಿದ್ದು ಕೃಷಿ ಮಾಡುವವರಿಗೆ ಸಾಲ ಸೌಲಭ್ಯ, ಯಂತ್ರೋಪಕರಣ (Agri Machinery) ವಿತರಣೆ ಇತರ ಸೌಲಭ್ಯ ಸಹ ನೀಡಲಾಗುತ್ತಿದೆ ಅಂತಹ ವಿಚಾರದ ಸಲುವಾಗಿ ಜನರಿಗೆ ಕೂಡ ಸರಕಾರದ ಯೋಜನೆ ಬಹಳ ಉಪಯೋಗವಾಗುತ್ತಿದೆ.
ಕೃಷಿ ಚಟುವಟಿಕೆಯ ಕ್ಲಿಷ್ಟ ಪರಿಸ್ಥಿತಿಯನ್ನು ಸರಿಪಡಿಸಿ ಸರಿಯಾದ ವ್ಯವಸ್ಥೆ ಜಾರಿಗೊಳಿಸಬೇಕಾದರೆ ರೈತರ ಶ್ರಮ ಕಡಿಮೆ ಆಗಿ ಸ್ಮಾರ್ಟ್ ಕೆಲಸಗಳು ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು (Agri Machinery) ಖರೀದಿ ಮಾಡಲು ಉತ್ತೇಜಿಸುವ ಸಲುವಾಗಿ ನೂತನ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ರೈತರ ಕೆಲಸ ಕಾರ್ಯಕ್ಕೆ ಕೂಲಿ ಆಳುಗಳು ಅಧಿಕ ಸಂಖ್ಯೆಯಲ್ಲಿ ಬೇಕಾಗಿದ್ದು ಸರಕಾರವು ರೈತರಿಗೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಹಾಯಧನ ನೀಡಲು ಮುಂದಾಗಿದೆ. ಈ ಮೂಲಕ ಕೃಷಿ ಪರಿಕರದ ಯಂತ್ರ ಖರೀದಿ ಮಾಡುವವರಿಗೆ ಸಬ್ಸಿಡಿ ಸಹಾಯಧನ ಸಿಗಲಿದೆ.