ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜೀತ್ ಅಗರ್ಕರ್ ಅವರು ಬಿಸಿಸಿಐ ಕೇಂದ್ರ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಟಿ20 ವಿಶ್ವಕಪ್ ತಂಡದ ಆಯ್ಕೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ರೋಹಿತ್ ಹಾಗೂ ಅಗರ್ಕರ್ ಮುಕ್ತವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಜ್ಯುವೆಲ್ಲರಿ ಅಂಗಡಿಯಲ್ಲಿ ಎಸಿ ಸ್ಫೋಟ…ಮೂವರಿಗೆ ಗಂಭೀರ ಗಾಯ..!
ಅದರಲ್ಲಿ ಪ್ರಮುಖವಾಗಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಮುಖ್ಯ ಆಯ್ಕೆಗಾರ ಅಜೀತ್ ಅಗರ್ಕರ್ ಮಾಧ್ಯಮ ಮಿತ್ರರಿಗೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ‘ಕೆಎಲ್ ರಾಹುಲ್ ಐಪಿಎಲ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ನಾವು ಮುಖ್ಯವಾಗಿ ಮಧ್ಯಮ ಕ್ರಮಾಂಕದ ಆಯ್ಕೆಗಳನ್ನು ಹುಡುಕುತ್ತಿದ್ದೆವು.
ಹಾಗಾಗಿ, ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಅದಕ್ಕೆ ಹೆಚ್ಚು ಸೂಕ್ತವೆಂದು ನಾವು ಭಾವಿಸಿದ್ದೇವೆ. ಸ್ಯಾಮ್ಸನ್ ತಂಡದಲ್ಲಿ ಎಲ್ಲಿ ಬೇಕಾದರೂ ಬ್ಯಾಟ್ ಮಾಡಬಹುದು. ಆದ್ದರಿಂದ, ತಂಡಕ್ಕೆ ಏನು ಅಗತ್ಯವಿದೆಯೇ ಎಂಬುದರ ಹೊರತು ಯಾರು ಉತ್ತಮರು ಎಂಬುದರ ಬಗ್ಗೆ ಅಲ್ಲ ಎಂದು ಅಗರ್ಕರ್ ಹೇಳುವ ಮೂಲಕ ಎಲ್ಲಾ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. ಅಮೇರಿಕಾದಲ್ಲಿ ಪಿಚ್ ಹೇಗಿರುತ್ತೆ ಅಂತ ಗೊತ್ತಿಲ್ಲ. ನಾವು ವೆಸ್ಟ್ ಇಂಡೀಸ್ ನಲ್ಲಿ ಆಡಿದ್ದೇವೆ ಆದರೆ ಅಮೇರಿಕಾದಲ್ಲಿ ಆಡಿಲ್ಲ. ಆದರೂ ಇದು ನಮಗೆ ಹೊಸದು. ಅಲ್ಲದೇ ಏನಾದರೂ ಐಪಿಎಲ್ ನಂತಯೇ ಇಲ್ಲಿಯೂ ನಮ್ಮ ಆಟಗಾರರು ಅಬ್ಬರಿಸಿದರೆ ತಂಡಕ್ಕೆ ಇನ್ನಷ್ಟು ಅನುಕೂಲಕರವಾಗಿರಲಿದೆ ಎಂದು ರೋಹಿತ್ ಶರ್ಮಾ.
ಇನ್ನು, ಆಟಗಾರರ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿದ ಅಗರ್ಕರ್, ನಾವು ಕೊಹ್ಲಿ ಸ್ಟ್ರೈಕ್-ರೇಟ್ ಬಗ್ಗೆ ಚರ್ಚಿಸುತ್ತಿಲ್ಲ. ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ವ್ಯತ್ಯಾಸವಿದೆ. ನಿಮಗೆ ಅನುಭವ ಬೇಕು. ನಮಗೆ ತಂಡದಲ್ಲಿ ಸಾಕಷ್ಟು ಸಮತೋಲನವಿದೆ. ವಿಶ್ವಕಪ್ ಪಂದ್ಯ ಐಪಿಎಲ್ ಗಿಂತ ವಿಭಿನ್ನವಾಗಿದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ
ಇದರ ನಡುವೆ ರೋಹಿತ್ ಶರ್ಮಾ, ನನಗೆ ತಂಡದಲ್ಲಿ 4 ಸ್ಪಿನ್ನರ್ಗಳು ಬೇಕಾಗಿದ್ದಾರೆ. ಅದಕ್ಕೆ ಕಾರಣವನ್ನು ನಾನು ಇಲ್ಲಿ ಹೇಳುವುದಿಲ್ಲ, ನಾನು ಯುಎಸ್ಎಯಲ್ಲಿ ನಿಮಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಬಳಿಕ ರೋಹಿತ್ ಅಮೇರಿಕಾದಲ್ಲಿ ಬೆಳಗ್ಗೆ 10 ಗಂಟೆಗೆ ಪಂದ್ಯ ಆರಂಭವಾಗುವುದರಿಂದಾಗಿ ಸ್ಪಿನ್ನರ್ ಗಳ ಅವಶ್ಯಕತೆ ತಂಡಕ್ಕೆ ಮುಖ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.