ಬೆಂಗಳೂರು: ಪೆನ್ಡ್ರೈವ್ ಇಟ್ಟುಕೊಂಡು ಡಿಕೆ ಶಿವಕುಮಾರ್ ಅವರಿಗೆ ಒಕ್ಕಲಿಗ ನಾಯಕನಾಗುವ ಬಯಕೆ ಎಂಬ ಹೆಚ್ಡಿಕೆ ಹೇಳಿಕೆಗೆ ಡಿಸಿಎಂ ಕಿಡಿಕಾರಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 7 ಬಳಿಕ ಪ್ರಜ್ವಲ್ ರೇವಣ್ಣ ಪ್ರಕರಣ ಏನಾಗುತ್ತೆ ನೋಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಓ ಸ್ವಾಮೀ ಮೇ 7 ಅಲ್ಲ, ಟೈಂ ಯಾಕೆ ವೇಸ್ಟ್ ಮಾಡ್ಬೇಕು, 7ನೇ ತಾರೀಖಿನವರೆಗೆ ಯಾಕೆ ಬೇಕು? ನಾವೂ ಬಿಚ್ಚಬೇಕಾ? ನಾವು ಯಾರು ಯಾರು ಎಲ್ಲಿ ಇದರ ಮೂಲವೇನು ಯಾರೇನು, ಯಾರ ಹಿನ್ನೆಲೆ ಏನು, ಎತ್ತ ಅಂತ ಬಿಚ್ಚಬೇಕಾ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ಯಾವುದೋ ಒಂದು ಪೇಪರ್ ನಲ್ಲಿ ಬರೆದಿದ್ದರು, ಇದಕ್ಕೆ ಯಾರು ಕಾರಣ ಅಂತ ಅವರ ಫ್ಯಾಮಿಲಿಯವರ ಇಂಟರ್ನಲ್ ಇಶ್ಯೂ. ಉಪ್ಪು ತಿಂದವರು ನೀರು ಕುಡಿಯಬೇಕು ಅಂತ ಹೇಳಿದ್ದು ನಾವಾ..? ಯಾಕೆ ಸ್ಟಾಂಡ್ ಬದಲಾವಣೆ ಮಾಡ್ತೀರಾ..? ಅವರ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಅಂದ್ರು ಟಿಕೆಟ್ ಕೊಡಬಾರದು ಅಂತ ಹೇಳಿದ್ರು. ನಮ್ಮ ಫ್ಯಾಮಿಲಿಯಲ್ಲಿ ಯಾರನ್ನೂ ನಿಲ್ಲಿಸಲ್ಲ ಅಂದ್ರು. ತಪ್ಪಾಯ್ತು ಕ್ಷಮಿಸಿ ಅಂದ್ರು ಇದು ಫ್ಯಾಮಿಲಿ ಇಂಟರ್ನಲ್ ಇಶ್ಯೂ ಎಂದರು.