ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಅದ್ದೂರಿ ಹನುಮ ಜಯಂತಿಯನ್ನು ಆಚರಿಸಲಾಯಿತು ಜಮಖಂಡಿ ರೋಡ ನಲ್ಲಿರುವ ಹನುಮಾನ ಮಂದಿರದಲ್ಲಿ ಬೆಳಗ್ಗೆ ಯಿಂದಲೇ ಪೂಜೆ ಪುನಸ್ಕಾರ ನಡೆದು ಸಾಯಂಕಾಲ ರಥದಲ್ಲಿ ಹನುಮಾನ ಮೂರ್ತಿ ಮೆರವಣಿಗೆ ನಡೆಯಿತು,
ರಥದ ಪೂಜೆಯನ್ನು ದಯಾನಂದ ಸ್ವಾಮಿಜೀ, ಜಯಕುಮಾರ ಸನದಿ, ದತ್ತ ಸಣ್ಣಕ್ಕಿ, ವಿನೋದ ದರೂರೆ, ಸಂತೋಷ್ ಮೋದಿ ನೆರವೇರಿಸಿದರು ಕುಡಚಿ ಪ್ರಮುಖ ಬಿದಿಗಳಲ್ಲಿ ಡಿಜೆ ಹಾಡುಗಳ ಸದ್ದಿನೊಂದಿಗೆ ಮೆರವಣಿಗೆ ಜರುಗಿತು,
ಸಾವಿರಾರು ಸಂಖ್ಯೆಯ ಯುವ ಸಮೂಹ ಡಿಜೆ ಹಾಡಿಗೆ ಹೆಜ್ಜೆ ಹಾಕಿ ಹರ್ಷ ವ್ಯಕ್ತಪಡಿಸಿದರು, ಇತ್ತ ಪೊಲೀಸ್ ಇಲಾಖೆ ಕೂಡ ಬಿಗಿ ಬಂದೋಬಸ್ತ್ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದರು, ಈ ಸಂದರ್ಭದಲ್ಲಿ
ವಿಶ್ವ ಹಿಂದೂ ಪರಿಷತ್ ಭಜರಂಗಳ ತಾಲೂಕ ಅಧ್ಯಕ್ಷ ಶಿವಾನಂದ ಲಕ್ಕನಗಾಂವ,ಉಪಾಧ್ಯಕ್ಷ ಶೇಖರ್ ದಳವಾಯಿ, ತಾಲೂಕ ಧರ್ಮಚಾರ್ಯ ನಾಗೇಶ್ ಕವಲಗುಡ್ಡ, ಪ್ರೇಮದಾಸ್ ಗುಪ್ತ, ಮಯೂರ ಕಾಗೆ, ಜಗನ್ನಾಥ ಮಂಗಸೂಳಿ, ಕಿರಣ ತುಪ್ಪದ, ಅಕ್ಷಯ್ ಲೋಹರ, ವಿಜಯ ಸನದಿ, ಅಪಾರ ಸಂಖ್ಯೆಯ ಹಿಂದೂ ಕಾರ್ಯಕರ್ತರು ಭಕ್ತದಿಗಳು ಅದ್ದೂರಿ ಜಯಂತಿಗೆ ಸಾಕ್ಷಿ ಯಾದರು