ಯಾದಗಿರಿ:- ಈಜಾಡಲು ಹೋಗಿ ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕರ ಕುಟುಂಬದ ಕಣ್ಣೀರಿಗೆ ಪೊಲೀಸ್ ಇಲಾಖೆ ಮಿಡಿದಿದೆ.
ತೇರಹಳ್ಳಿಯ ಶ್ರೀ ಗೌರಿ ಗಂಗಾಧೇಶ್ವರ ದೇವಸ್ಥಾನದ ಅರ್ಚಕರ ಬದಲಾವಣೆಗೆ ಆಗ್ರಹ!
ಮೃತ ಬಾಲಕರ ಅಂತ್ಯ ಸಂಸ್ಕಾರಕ್ಕೆ ಯಾದಗಿರಿ ಪೊಲೀಸರು ಆರ್ಥಿಕ ಸಹಾಯ ಮಾಡಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಆರ್ಥಿಕ ಸಹಾಯ ಮಾಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಯಾದಗಿರಿ ಎಸ್ಪಿ ಸಂಗೀತಾ ಜಿ ಮತ್ತು ಡಿವೈಎಸ್ಪಿ ಜಾವೇದ್ ಇನಾಂದಾರ್ ಸಲಹೆ ಮೇರೆಗೆ ಮೃತ ಬಾಲಕರ ಕುಟುಂಬಕ್ಕೆ ಪಿಎಸ್ಐ ದೇವೇಂದ್ರರೆಡ್ಡಿ ಹಾಗೂ ರಾಜಶೇಖರ್ ರಾಠೋಡ್ ಸಹಾಯ ಮಾಡಿದ್ದಾರೆ.
ಅಂತ್ಯ ಸಂಸ್ಕಾರ ಮುಗಿಯುವವರೆಗೂ ಗ್ರಾಮದಲ್ಲೇ ಪೊಲೀಸರು ಬೀಡು ಬಿಟ್ಟಿದ್ದಾರೆ.