ಮಧುಮೇಹಿಗಳು ಕಲ್ಲಂಗಡಿ ತಿನ್ನಬಹುದಾ!? ತಜ್ಞರು ಹೇಳುವುದಾದರೂ ಏನು!? ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ..
ಮಧುಮೇಹ ಇದ್ದಾಗ ಅನೇಕ ಹಣ್ಣುಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಈ ಹಣ್ಣುಗಳು ಸಕ್ಕರೆ ಮಟ್ಟವನ್ನು ಹೆಚ್ಚಿಸುವ ನೈಸರ್ಗಿಕ ಸಕ್ಕರೆ ಫ್ರಕ್ಟೋಸ್ ಅನ್ನು ಹೊಂದಿರುತ್ತದೆ
ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಬಡಿದಾಟ: ಓರ್ವನ ಸ್ಥಿತಿ ಗಂಭೀರ..!
ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಡಲು ಹೆಸರುವಾಸಿಯಾಗಿರುವ ಕಲ್ಲಂಗಡಿ ಹಣ್ಣನ್ನು ಮಧುಮೇಹಿಗಳು ತಿನ್ನಬೇಕೋ ಬೇಡವೋ ಎಂಬ ಗೊಂದಲ ಹಲವರಲ್ಲಿದೆ. ಏಕೆಂದರೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರ ಜೊತೆಗೆ ಸಿಹಿಯೂ ಹೌದು. ನೀವು ಕೂಡಾ ಮಧುಮೇಹ ರೋಗಿಯಾಗಿದ್ದು, ಈ ಗೊಂದಲ ನಿಮ್ಮನ್ನು ಕೂಡಾ ಕಾಡುತ್ತಿದ್ದರೆ ಇಲ್ಲಿದೆ ನೋಡಿ ಮಾಹಿತಿ..
ಕಲ್ಲಂಗಡಿಯಲ್ಲಿ ಎಷ್ಟು ಸಕ್ಕರೆ ಇರುತ್ತದೆ ? :
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ನ ಮಾಹಿತಿಯ ಪ್ರಕಾರ , ಒಂದು ಕಪ್ ಅಥವಾ 152 ಗ್ರಾಂ ಕತ್ತರಿಸಿದ ಕಲ್ಲಂಗಡಿ 9.42 ಗ್ರಾಂ ನೈಸರ್ಗಿಕ ಸಕ್ಕರೆ ಮತ್ತು 11.5 ಗ್ರಾಂ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಕಲ್ಲಂಗಡಿ ಸಾಮಾನ್ಯವಾಗಿ 72 ರ GI ಅನ್ನು ಹೊಂದಿರುತ್ತದೆ. ಆದರೆ, 120-ಗ್ರಾಂ ಹಣ್ಣಿನಲ್ಲಿ 5ರ GL ಇರುತ್ತದೆ. ಕಲ್ಲಂಗಡಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಎಲ್ಲಾ ಹಣ್ಣುಗಳಂತೆ ಕಡಿಮೆಯಾಗಿರುತ್ತದೆ. ಹಾಗಾಗಿ ಸಮತೋಲಿತ ಆಹಾರದ ಭಾಗವಾಗಿ ಸಣ್ಣ ಪ್ರಮಾಣದಲ್ಲಿ ಇದನ್ನು ಸೇವಿಸಬಹುದು.
ಕಲ್ಲಂಗಡಿ ತಿನ್ನುವುದರಿಂದ ಸಕ್ಕರೆ ಹೆಚ್ಚಾಗಬಹುದೇ? :
ಕಲ್ಲಂಗಡಿ ತಿನ್ನುವುದರಿಂದ ಮಧುಮೇಹಿಗಳ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದೇ ಅಥವಾ ಇಲ್ಲವೇ ಎಂಬುದು ಸೇವಿಸುವ ಹಣ್ಣಿನ ಪ್ರಮಾಣವನ್ನು ಅವಲಂಬಿಸಿರುತ್ತದೆ.ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುತ್ತಿದ್ದರೆ,ಕಲ್ಲಂಗಡಿ ತಿನ್ನುವುದರಿಂದ ಸಕ್ಕರೆಯ ಮಟ್ಟದಲ್ಲಿ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.
ಕಲ್ಲಂಗಡಿ ತಿನ್ನುವುದರಿಂದ ಮಧುಮೇಹದಲ್ಲಿ ಪ್ರಯೋಜನ :
ಮಧುಮೇಹ ರೋಗಿಗಳಲ್ಲಿ ಹೃದಯರಕ್ತನಾಳದ ಕಾಯಿಲೆಯ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಈ ಸ್ಥಿತಿಯಲ್ಲಿ ನಿಯಂತ್ರಿತ ಪ್ರಮಾಣದಲ್ಲಿ ಕಲ್ಲಂಗಡಿ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ವಾಸ್ತವವಾಗಿ,ಕಲ್ಲಂಗಡಿಗೆ ಕೆಂಪು ಬಣ್ಣವನ್ನು ನೀಡುವ ಅಂಶವಾದ ಲೈಕೋಪೀನ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಲೈಕೋಪೀನ್ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ