ಬೆಂಗಳೂರು: ಯಶವಂಶಪುರ-ಕಣ್ಣೂರು ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಬೈಯ್ಯಪ್ಪನಹಳ್ಳಿ ರೈಲ್ವೇ ಠಾಣಾ ವ್ಯಾಪ್ತಿಯ ಮಾರತ್ ಹಳ್ಳಿ ಬಳಿ ನಡೆದಿದೆ.ಮಾರತ್ ಹಳ್ಳಿ ರೈಲ್ವೇ ಹಳಿ ಮೇಲೆ ದುರ್ಘಟನೆ ನೆಡೆದಿದ್ದು ಘಟನೆಯಲ್ಲಿ ಆಂಧ್ರದ ಚಿತ್ತೂರು ಮೂಲದ ಶಶಿಕುಮಾರ್ ಲೊಕೇಶ್ ಹಾಗೂ ಮತ್ತೋರ್ವ ಸಾವನ್ನಪ್ಪಿದ್ದಾರೆ.
ದ್ವೇಷದ ಭಾಷಣ – ಪ್ರಧಾನಿ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು..!
ನಿನ್ನೆ ರಾತ್ರಿ ಘಟನೆ ನೆಡೆದಿದ್ದು ಮೃತ ಮೂವರು ಯುವಕರು ಅತಿಕ್ರಮವಾಗಿ ರೈಲ್ವೇ ಟ್ರ್ಯಾಕ್ ಬಳಿ ನಡೆದುಕೊಂಡು ಬರುತ್ತಿದ್ದರು. ಅಕ್ಕ ಪಕ್ಕ ಅಪಾರ್ಟ್ಮೆಂಟ್ ಇರುವ ಹಿನ್ನೆಲೆ ಸ್ಥಳ ಕಿರಿದಾಗಿದೆ ಅಲ್ಲಿ ಯುವಕರು ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಘಟನೆಯ ಬಳಿಕ ರೈಲ್ವೇ ಸಿಬ್ಬಂದಿ ಮುಂದಿನ ಸ್ಟೇಷನ್ ಗೆ ಮಾಹಿತಿ ನೀಡಿದ್ದು ಬಳಿಕ ರೈಲ್ವೆ ಪೊಲೀಸರು ಹೋಗಿ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಯುವಕರು ಉದ್ದೇಶಪೂರ್ವಕವಾಗಿ ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರಾ ? ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ರೈಲ್ವೇ ಪೊಲೀಸರು ತಿಳಿಸಿದ್ದಾರೆ.