ಕೊಚ್ಚಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣದ ಅಪರಾಧಿಗೆ ಕೇರಳದ (Kerala) ವಿಶೇಷ ಪೋಕ್ಸೋ ನ್ಯಾಯಾಲಯ (POCSO Court) ಮರಣದಂಡನೆ (Death Sentence) ವಿಧಿಸಿದೆ. ಬಿಹಾರ ಮೂಲದ ಅಪರಾಧಿ ಅಶ್ವಕ್ ಆಲಂ 5 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದಿದ್ದ. ಆತನನ್ನು ಗಲ್ಲಿಗೇರಿಸುವಂತೆ ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯದ ನ್ಯಾಯಾಧೀಶ ಕೆ ಸೋಮನ್ ಆದೇಶಿಸಿದ್ದಾರೆ. ಅಪರಾಧಿಗೆ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಅಡಿಯಲ್ಲಿ ಅತ್ಯಾಚಾರ ಮತ್ತು ತೀವ್ರತರವಾದ ಲೈಂಗಿಕ ದೌರ್ಜನ್ಯದ ವಿವಿಧ ಅಪರಾಧಗಳಿಗಾಗಿ ಐದು ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. ಜೀವಾವಧಿ ಶಿಕ್ಷೆ ಎಂದರೆ ಅಪರಾಧಿ ತನ್ನ ಸಹಜ ಜೀವನ ಪಯರ್ಂತ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ 6 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. https://ainlivenews.com/joint_pain_suprem_ray_treatment_reiki/ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಸಿಎಂ ಪಿಣರಾಯಿ ವಿಜಯನ್, ಮಕ್ಕಳ ದಿನದಂದು ಪ್ರಕರಣದಲ್ಲಿ ನೀಡಿದ ಶಿಕ್ಷೆಯನ್ನು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರಿಗೆ ಬಲವಾದ…
Author: AIN Author
ಇತ್ತೀಚಿನ ದಿನಗಳಲ್ಲಿ ಅಸಮರ್ಪಕ ಜೀವನಶೈಲಿ, ಆಹಾರ ಸರಿಯಾಗಿ ಸೇವನೆ ಮಾಡದೇ ಇರುವುದು, ಹಾರ್ಮೋನುಗಳ ವ್ಯತ್ಯಾಸದಿಂದ ಹೆಚ್ಚಿನ ಮಹಿಳೆಯರ ಮುಖದ ಮೇಲೆ ಕಪ್ಪನೆಯ ಕೂದಲು ಬೆಳೆಯುತ್ತದೆ. ಇದು ಮುಖದ ಅಂದವನ್ನೇ ಹಾಳು ಮಾಡುತ್ತದೆ. ಅಷ್ಟೇ ಅಲ್ಲದೆ ಮುಜುಗರ ಉಂಟು ಮಾಡುತ್ತದೆ. ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತದೆ. ಕೆಲವರು ಲೇಸರ್ ಚಿಕಿತ್ಸೆಗೆ ಒಳಗಾಗುತ್ತಾರೆ. ಇದು ದುಬಾರಿ ಚಿಕಿತ್ಸೆಯಾಗಿದೆ. ಇನ್ನು ಕೆಲವರು ಬ್ಯೂಟಿ ಪಾರ್ಲರ್ಗಳಿಗೆ ಹೋಗಿ ಕೂದಲನ್ನು ತೆಗೆಸುತ್ತಾರೆ. ಇದು ಹೆಚ್ಚು ಉರಿಯನ್ನು ನೀಡುತ್ತದೆ. ಆದರೆ ಯಾವುದೇ ಅಪಾಯವಿಲ್ಲದೆ ಮುಖದ ಅಂದವನ್ನೂ ಹೆಚ್ಚಿಸುವ ಅಡುಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿಕೊಂಡು ಫೇಸ್ಪ್ಯಾಕ್ ಮಾಡಿ ಮುಖದ ಕೂದಲನ್ನು ಹೋಗಲಾಡಿಸಬಹುದು. ಅದರ ಬಗ್ಗೆ ಮಾಹಿತಿ ಇಲ್ಲಿದೆ ಜೇನು ಮತ್ತು ಅರಿಶಿನ ಅರಿಶಿನ ಮತ್ತು ಜೇನು ಎರಡೂ ಕೂಡ ಮುಖಕ್ಕೆ ವಾಕ್ಸ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಿ, ಮುಖದ ಮೇಲಿನ ಅನಗತ್ಯ ಕೂದಲನ್ನು ಹೋಗಲಾಡಿಸುತ್ತದೆ. ಹೀಗೆ ಮಾಡಿ ಒಂದು ಬೌಲ್ಗೆ ಒಂದು ಚಮಚ ಶುದ್ಧ ಜೇನುತುಪ್ಪವನ್ನು ಹಾಕಿ. ನಂತರ ಅದಕ್ಕೆ ಒಂದು…
ಬೆಂಗಳೂರು:- ಮುಂದಿನ 4 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಯಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ರಾಮನಗರ, ಮೈಸೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ, ತುಮಕೂರು, ವಿಜಯನಗರದ ಅಲ್ಲಲ್ಲಿ ಮಳೆಯಾಗಬಹುದು. ಕೆಲವು ಕಡೆ ಮೋಡ ಕವಿದ ವಾತಾವರಣ ಇರಬಹುದು. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಯಾವುದೇ ಮಳೆ ಸೂಚನೆ ಇಲ್ಲ. ಬದಲಿಗೆ ಒಣಹವೆಯೇ ಇರಲಿದೆ. ಇತ್ತ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ವಿಜಯಪುರ, ಯಾದಗಿರಿಯಲ್ಲೂ ಒಣಹವೆ ಇರಲಿದೆ. ರಾಜಧಾನಿ ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ…
ಭಾರತ ಹಾಗೂ ಬಹುತೇಕ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಕಳೆದ 10 ದಿನಗಳಲ್ಲಿ ಮೂರನೇ ಬಾರಿಗೆ ಬೆಲೆಗಳ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,175 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 15ಕ್ಕೆ): 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,550 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,600 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,550 ರೂ 24 ಕ್ಯಾರಟ್ನ…
ಜೆರುಸಲೇಂ: ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧ ಮುಂದುವರಿದಿದ್ದು, ಈ ಮಧ್ಯೆ ಇಸ್ರೇಲ್ ಹಮಾಸ್ಗೆ ಸಂಬಂಧಿಸಿದಂತೆ ಹೊಸ ವಿಡಿಯೋ ಬಿಡುಗಡೆ ಮಾಡಿದೆ. ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ತಮ್ಮ ಸೈನಿಕರು ಶಿಶುವಿಹಾರದಲ್ಲಿ (ಪುಟ್ಟ ಮಕ್ಕಳ ಶಾಲೆ) ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ಸಾಧನಗಳನ್ನು ಪತ್ತೆ ಮಾಡಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಎಕ್ಸ್ (ಈ ಹಿಂದಿನ ಟ್ವಿಟ್ಟರ್) ನಲ್ಲಿ ವಿಡಿಯೋ ಹಂಚಿಕೊಂಡ ಇಸ್ರೇಲ್ ಸೇನೆಯು, ಐಡಿಎಫ್ ಪಡೆಗಳು ಉತ್ತರ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಗಾಜಾದ ಶಿಶುವಿಹಾರದೊಳಗೆ ಶಸ್ತ್ರಾಸ್ತ್ರಗಳು, https://ainlivenews.com/joint_pain_suprem_ray_treatment_reiki/ ಮದ್ದುಗುಂಡುಗಳು ಮತ್ತು ಸ್ಫೋಟಕ ಸಾಧನಗಳನ್ನು ಕಂಡುಕೊಂಡಿವೆ ಎಂದು ಮಾಹಿತಿ ನೀಡಿದೆ. ಉತ್ತರ ಗಾಜಾದ ವಸತಿ ಪ್ರದೇಶಗಳಿಂದ “ಮಹತ್ವದ” ಹಮಾಸ್ ಯುದ್ಧ ಯೋಜನೆಗಳನ್ನು ವಿವರಿಸುವ ಅನೇಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರವನ್ನು ಪಡೆಗಳು ವಶಪಡಿಸಿಕೊಂಡಿವೆ ಎಂದೂ ಐಡಿಎಫ್ ಹೇಳಿದೆ. ಶಿಶುವಿಹಾರದ ಪಕ್ಕದಲ್ಲಿ ಒಂದನ್ನು ಒಳಗೊಂಡಂತೆ, ಸೈನಿಕರು ಸುರಂಗದ ಶಾಫ್ಟ್ಗಳನ್ನು ಸಹ ಪತ್ತೆಹಚ್ಚಿದ್ದಾರೆ. ಇದು ಸಹ ವಿಸ್ತೃತ ಭೂಗತ ಮಾರ್ಗಕ್ಕೆ ಕಾರಣವಾಯಿತು ಎಂದೂ ಇಸ್ರೇಲ್ ಡಿಫೆನ್ಸ್ ಫೋರ್ಸ್ ಹೇಳಿದೆ.
ಮಂಗಳೂರು :-ಎಮ್ಮೆಕೆರೆಯಲ್ಲಿ ಒಲಿಂಪಿಕ್ಸ್ ಈಜುಕೊಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಯುಟಿ ಖಾದರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಗುಣಮಟ್ಟದ ಈಜುಕೊಳ ಕಾಮಗಾರಿ ಸಂಪೂರ್ಣಗೊಂಡಿದ್ದು, ನ.24ರಿಂದ ನಡೆಯಲಿರುವ 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್ಶಿಪ್ಗೆ ಸನ್ನದ್ಧಗೊಂಡಿದೆ. ಈ ಚಾಂಪಿಯನ್ಶಿಪ್ ಉದ್ಘಾಟನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಜುಕೊಳವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇಂಟರ್ ನ್ಯಾಷನಲ್ ಈಜು ಫೆಡರೇಶನ್ ನಿಗದಿಪಡಿಸಿದ ಮಾನದಂಡದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಒಟ್ಟು 24.94 ಕೋಟಿ ರು. ಯೋಜನಾ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು. ಈಜುಕೊಳವು 50 ಮೀ. ಉದ್ದ, 25 ಮೀ. ಅಗಲ ಮತ್ತು 2.2 ಮೀ.ನಿಂದ 1.4 ಮೀ.ವರೆಗಿನ ಆಳವನ್ನು ಹೊಂದಿದೆ. ಸ್ಪರ್ಧೆಯ ಪೂಲ್ ಜತೆಗೆ 25 ಮೀ. ಉದ್ದ- 10 ಮೀಟರ್ ಅಗಲ, 2.2 ಮೀ. ಆಳದ ಅಭ್ಯಾಸ ಪೂಲ್ನ್ನೂ ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 13.8 ಮೀ. ಉದ್ದ- 10 ಮೀ.…
ಭಾರತ-ನ್ಯೂಜಿಲೆಂಡ್ ತಂಡಗಳು ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್ ಸೆಮಿ ಫೈನಲ್ ಪಂದ್ಯವನ್ನು ಆಡಲಿದ್ದು, ಭಾರಿ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದೆ. ಮಹತ್ವದ ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅಂಡ್ ಟೀಂ ಗ್ರೂಪ್ ಹಂತದ 9 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ಸೆಮೀಸ್ಗೆ ಎಂಟ್ರಿ ಕೊಟ್ಟಿದೆ. ನ್ಯೂಜಿಲೆಂಡ್ ತಂಡ ನಾಲ್ಕೇ ತಂಡವಾಗಿ ಬಂದಿದೆ. ಆದರೆ ಹಿಂದಿನ ವಿಶ್ವಕಪ್ ಪಂದ್ಯಗಳಲ್ಲಿ ಟೀಂ ಇಂಡಿಯಾದ ಅಂಕಿ ಅಂಶಗಳನ್ನು ನೋಡಿದಾಗ ಸ್ವಲ್ಪ ಆತಂಕವಾಗುತ್ತದೆ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಪಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೇರಿದಂತೆ ಐಸಿಸಿಯ ಟೂರ್ನಿಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 15 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಟೀಂ ಇಂಡಿಯಾ 4 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಆದರೆ ಕಿವೀಸ್ ಪಡೆ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 117 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 59 ಪಂದ್ಯಗಳಲ್ಲಿ ಟೀಂ…
ಸ್ವಂತ ಮನೆ ಪ್ರತಿಯೊಬ್ಬರ ಕನಸು. ಸ್ವಂತ ಮನೆ ಖರೀದಿಸುವುದಾಗಲೀ, ಹೊಸ ಮನೆ ಕಟ್ಟಿಸುವುದಾಗಲೀ ಸುಲಭದ ವಿಷಯವಲ್ಲ. ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಎಲ್ಲರ ಬಳಿಯೂ ಮನೆಗೆ ಬೇಕಾದ ಪೂರ್ಣ ಮೊತ್ತ ಇರುವುದಿಲ್ಲ. ಅಂತಹ ಜನರು ಗೃಹ ಸಾಲವನ್ನು ಅವಲಂಬಿಸುತ್ತಾರೆ. ಪ್ರಸ್ತುತ ಇತರ ಸಾಲಗಳಿಗೆ ಹೋಲಿಸಿದರೆ ಗೃಹ ಸಾಲಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಿಗುತ್ತವೆ. ಆದರೆ, ಬ್ಯಾಂಕ್ಗಳಿಂದ ಬ್ಯಾಂಕ್ಗಳಿಗೆ ಬಡ್ಡಿ ದರ, ಪ್ರಕ್ರಿಯೆ ಶುಲ್ಕ ಭಿನ್ನವಾಗಿರುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲಕ್ಕೆ ಕನಿಷ್ಠ ಬಡ್ಡಿ ಇದೆ. ಬ್ಯಾಂಕ್ ಪ್ರಸ್ತುತ ವಾರ್ಷಿಕ ಶೇ. 8.60ಯಿಂದ ಶೇ. 9.45ರಷ್ಟು ಬಡ್ಡಿಯಲ್ಲಿ ಗೃಹ ಸಾಲವನ್ಉ ನೀಡುತ್ತದೆ. ಅಲ್ಲದೆ ಎಸ್ಬಿಐ ಗೃಹ ಸಾಲದ ಮೇಲೆ ಶೇ. 0.17ರಷ್ಟು ಪ್ರೊಸೆಸಿಂಗ್ ಫೀ (ಪ್ರಕ್ರಿಯೆ ಶುಲ್ಕ)ಯನ್ನೂ ವಿಧಿಸುತ್ತದೆ. ಎಚ್ಡಿಎಫ್ಸಿ ಬ್ಯಾಂಕ್ ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್ಡಿಎಫ್ಸಿ ಪ್ರಸ್ತುತ ಗೃಹ ಸಾಲಗಳ ಮೇಲೆ…
ಅಡುಗೆ ಮಾಡುತ್ತಿರುವ ಯಾರಿಗಾದರೂ, ಪದಾರ್ಥಗಳನ್ನು ಹೇಗೆ ಬಳಸುವುದು, ಎಷ್ಟು ಮಸಾಲಾವನ್ನು ಸೇರಿಸಬೇಕು ಮತ್ತು ಮೂಲಭೂತವಾಗಿ ವಿಷಯಗಳನ್ನು ಅಳತೆ ಮಾಡದೆಯೇ ಪಾಕವಿಧಾನವನ್ನು ಅನುಸರಿಸಬಹುದು. ಆದರೆ ಅದು ಯಾವಾಗಲೂ ಹಾಗಾಗುವುದಿಲ್ಲ. ಅಡುಗೆಗೆ ಸಾಕಷ್ಟು ಅಭ್ಯಾಸ ಮತ್ತು ತಾಳ್ಮೆ ಅಗತ್ಯವಿರುತ್ತದೆ. ಯಾವ ಖಾದ್ಯಕ್ಕೆ ಯಾವ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಕೆಲವೊಮ್ಮೆ ಇದೆಲ್ಲಾ ತಿಳಿದಿದ್ದರೂ ಆಹಾರ ತಯಾರಿಸುವಾಗ ತೊಂದರೆಯುಂಟಾಗುತ್ತದೆ. ಗಡಿಬಿಡಿಯ ಆಹಾರ (Food) ತಯಾರಿಕೆ ಯಲ್ಲಿ ಪಾತ್ರ ತಳ ಹಿಡಿದು ಬಿಡುತ್ತದೆ. ಆಹಾರ ಸೀದು ಹೋಗುತ್ತದೆ. ಹೀಗಾದಾಗ ತಕ್ಷಣಕ್ಕೇ ನಿರಾಶೆಯಾಗೋದು ಖಂಡಿತ. ಮತ್ತೆ ಅಡುಗೆ ಮಾಡ್ಬೇಕಲ್ಲಪ್ಪಾ ಅನ್ನೋ ಚಿಂತೆ ಕಾಡ್ಬೋದು. ಆದ್ರೆ ಅಷ್ಟೊಂದು ವರಿ ಮಾಡ್ಕೋಬೇಕಾಗಿಲ್ಲ. ಆಹಾರದಿಂದ ಸುಟ್ಟ ವಾಸನೆ (Burnt smell)ಯನ್ನು ತೆಗೆದುಹಾಕಲು ಸ್ಮಾರ್ಟ್ ಸಲಹೆಗಳು ಇಲ್ಲಿವೆ. ಅಡುಗೆ ಪಾತ್ರೆಯನ್ನು ಬದಲಾಯಿಸಿ: ಭಕ್ಷ್ಯದ ಕೆಳಭಾಗವು ಮಾತ್ರ ಸುಟ್ಟುಹೋದರೆ, ಪಾತ್ರೆ (Vessel)ಯನ್ನು ಬದಲಾಯಿಸುವುದು ಮತ್ತು ಸುಟ್ಟ ಆಹಾರವನ್ನು ಕೆರೆದು ಮಿಶ್ರಣ ಮಾಡುವುದನ್ನು ತಪ್ಪಿಸುವುದು ಸುಲಭವಾದ ಉಪಾಯವಾಗಿದೆ. ಸುಟ್ಟ ಆಹಾರವನ್ನು ತೆಗೆದು ಹಾಕಿ: ಅಡುಗೆಯ ಸಮಯದಲ್ಲಿ…
ಬೆಂಗಳೂರು:- ಸೇಫ್ ಸಿಟಿಯಾಗಿದ್ದ ರಾಜ್ಯ ರಾಜಧಾನಿ ಬೆಂಗಳೂರು ದೀಪಾವಳಿ ಪರಿಣಾಮವಾಗಿ ವಾಯು ಮಾಲಿನ್ಯ ವಿಚಾರದಲ್ಲಿ ತುಸು ಕೈ ಜಾರಿದೆ. ನಗರದ ಎಲ್ಲ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಳಗೊಂಡು ಗುಣಮಟ್ಟ ಕುಸಿದಿದೆ. ಉಸಿರಾಡಲು ಯೋಗ್ಯವಾದ ಗುಣಮಟ್ಟವನ್ನು ಕೆಲವೆಡೆ ಕಳೆದುಕೊಂಡಿದ್ದರೆ ಮತ್ತೆ ಕೆಲವೆಡೆ ಮಧ್ಯಮ ಗುಣಮಟ್ಟ ಕಾಯ್ದುಕೊಂಡಿದೆ. 108 ರಿಂದ 274 ರವರೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಎಕ್ಯೂಐ ದಾಖಲಾಗಿದೆ. ನೆರೆಹೊರೆ ರಾಜ್ಯಗಳ ರಾಜಧಾನಿಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನವೆಂಬರ್ ಆರಂಭದಲ್ಲಿ ಕಡಿಮೆ ಇದ್ದ ವಾಯು ಮಾಲಿನ್ಯದ ಪ್ರಮಾಣ ದೀಪಾವಳಿ ಹಬ್ಬದ ಹಿನ್ನಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕೃತ ವೆಬ್ತಾಣದಲ್ಲಿ ಸೂಚ್ಯಂಕದ ವಿವರಗಳನ್ನು ನಮೂದಿಸಿದ್ದು, ಇದರಲ್ಲಿ ಈ ಬಾರಿಯ ನವೆಂಬರ್ನಲ್ಲಿ ವಾಯುಗುಣಮಟ್ಟ ಸೂಚ್ಯಂಕ ಯೋಗ್ಯ ಪ್ರಮಾಣದ ಗೆರೆಯನ್ನು ಕಾಯ್ದುಕೊಂಡಿತ್ತಾದರೂ, ಈಗ ಯೋಗ್ಯ ಪ್ರಮಾಣವನ್ನು ದಾಟಿದೆ ಎನ್ನುವ ಮಾಹಿತಿಯನ್ನು ನೀಡಿದೆ. ನವೆಂಬರ್ನಲ್ಲಿ ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಬಾಪೂಜಿನಗರ, ಜಿಗಣಿ, ಬಿಟಿಎಂ ಲೇಔಟ್ ಮಾತ್ರ ಮಧ್ಯಮ ಪ್ರಮಾಣದ…