Author: Author AIN

ದಕ್ಷಿಣ ಗಾಝಾ ನಗರದ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿದ್ದು ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಗಾಜಾ ಪಟ್ಟಿಯ ಉತ್ತರದಲ್ಲಿರುವ ಗಾಜಾ ನಗರದಲ್ಲಿ ಇಸ್ರೇಲಿ ವಿಮಾನಗಳು ಎರಡು ಮನೆಗಳಿಗೆ ಡಿಕ್ಕಿ ಹೊಡೆದಿವೆ.ಈಜಿಪ್ಟ್ ಸರ್ಕಾರಿ ಅಧಿಕಾರಿಗಳು ಮತ್ತು ಹಮಾಸ್ ನಾಯಕರು ಇಸ್ರೇಲ್ನೊಂದಿಗೆ ಕದನ ವಿರಾಮ ಒಪ್ಪಂದದ ಸಾಧ್ಯತೆಗಳ ಬಗ್ಗೆ ಚರ್ಚಿಸುವ ಕೆಲವೇ ಗಂಟೆಗಳ ಮೊದಲು ಇಸ್ರೇಲ್ ನಿರಂತರ ಇಸ್ರೇಲಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಆಶ್ರಯ ಕೋರಿದ ಒಂದು ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ರಾಫಾ ಮೇಲೆ ಇಸ್ರೇಲ್ ದಾಳಿಗಳನ್ನು ಪ್ರಾರಂಭಿಸಿತು. ಹೊಸ ಇಸ್ರೇಲಿ ಅಡೆತಡೆಗಳಿಲ್ಲದಿದ್ದರೆ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ಪ್ರಸ್ತಾವನೆಯ ವಿಷಯಗಳಿಗೆ ಸಂಬಂಧಿಸಿದಂತೆ ಹಮಾಸ್ ಸಲ್ಲಿಸಿದ ಅವಲೋಕನಗಳು ಮತ್ತು ವಿಚಾರಣೆಗಳಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಕತಾರ್ ಮತ್ತು ಈಜಿಪ್ಟ್ನ ಮಧ್ಯವರ್ತಿಗಳಿಗೆ ಹಮಾಸ್ ನೀಡಿದ ಕದನ ವಿರಾಮ ಪ್ರಸ್ತಾಪದ ಬಗ್ಗೆ ಗಾಝಾ ಗುಂಪಿನ ಉಪ ಮುಖ್ಯಸ್ಥ ಖಲೀಲ್ ಅಲ್-ಹಯಾ ನೇತೃತ್ವದ…

Read More

ಕಳೆದ 20 ವರ್ಷ ಹಿಂದೆ ಇಸ್ರೇಲ್ ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಫೆಲಸ್ತೀನಿ ಲೇಖಕ ಬಾಸಿಮ್ ಖಂದಕ್ಜೀ “ಎ ಮಾಸ್ಕ್ ದ ಕಲರ್ ಆಫ್ ಸ್ಕೈ” ಎಂಬ ಅರೆಬಿಕ್ ಕಾದಂಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 2024 ಇಂಟರ್ ನ್ಯಾಷನಲ್ ಪ್ರೈಸ್ ಫಾರ್ ಅರೇಬಿಕ್ ಫಿಕ್ಷನ್ ಪ್ರಶಸ್ತಿಯನ್ನು ಅಬುಧಾಬಿಯಲ್ಲಿ ಪ್ರಕಟಿಸಲಾಗಿದೆ. ಈ ಬಹುಮಾನವನ್ನು ಬಾಸಿಮ್ ಖಂದಕ್ಜೀ ಪರವಾಗಿ ಲೆಬನಾನ್‌ ಮೂಲದ ಪ್ರಕಾಶನ ಸಂಸ್ಥೆ ದಾರುಲ್ ಆದಾಬ್ ನ ಮಾಲಿಕ ರಾಣಾ ಇದ್ರೀಸ್ ಸ್ವೀಕರಿಸಿದರು. ಇಸ್ರೇಲಿ ಆಕ್ರಮಿತ ಪಶ್ಚಿಮ ದಂಡೆ ನಗರವಾದ ನಬ್ಲಸ್ ನಲ್ಲಿ 1983ರಲ್ಲಿ ಜನಿಸಿದ ಬಾಸಿಮ್ ಖಂದಕ್ಜೀ, ತನ್ನ 21ನೇ ವಯಸ್ಸಿನಲ್ಲಿ 2004ರಲ್ಲಿ ಬಂಧನವಾಗುವವರೆಗೂ ಹಲವು ಸಣ್ಣ ಕಥೆಗಳನ್ನು ಬರೆದಿದ್ದರು. ಟೆಲ್ ಅವೀವ್ ನ ಮೇಲೆ ನಡೆದ ಮಾರಕ ಬಾಂಬ್ ದಾಳಿಗೆ ಸಂಬಂಧಿಸಿದ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿದ್ದುಕೊಂಡೇ ಇಂಟರ್ ನೆಟ್ ಮೂಲಕ ಅಧ್ಯಯನ ಮಾಡಿ ವಿವಿ ಶಿಕ್ಷಣ ಪೂರ್ಣಗೊಳಿಸಿದ್ದರು. ಈ ಕಾದಂಬರಿಯ ಶೀರ್ಷಿಕೆಯಲ್ಲಿರುವ ಮಾಸ್ಕ್ ಎನ್ನುವುದು…

Read More

ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಮಿಸ್ಟರ್​ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಸದ್ಯ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ, ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಆಮಿರ್ ಸಾಕಷ್ಟು ಸಮಯದ ಬಳಿಕ ಕಾರ್ಯಕ್ರಮವೊಂದಲ್ಲಿ ಕಾಣಿಸಿಕೊಂಡು ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಮೀರ್ ಖಾನ್​ ಸಿನಿ ಜರ್ನಿ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಬಗ್ಗೆ ನಟ ಹೇಳಿಕೊಂಡಿದ್ದಾರೆ. ‘ನನ್ನ ಹಿರಿಯ ಮಗ ಜುನೈದ್ ಜನನದ ವೇಳೆ  ರೀನಾ ಜಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ನಾವು ಆಸ್ಪತ್ರೆಯಲ್ಲಿದ್ದೆವು. ಒಳ್ಳೆ ಗಂಡನಾದ ನಾನು ಅವಳೊಂದಿಗೆ ಉಸಿರಾಟದ ವ್ಯಾಯಾಮ ಮಾಡಿದ್ದೆ. ಅವಳ ಹೆರಿಗೆ ನೋವು ಹೆಚ್ಚಾದಾಗ, ನಾನು ಉಸಿರಾಟದ ವ್ಯಾಯಾಮದ ಮೂಲಕ ಅವಳನ್ನು ಕೂಲ್ ಮಾಡಲು ಪ್ರಯತ್ನಿಸಿದೆ, ಈ ವೇಳೆ ರೀನಾ ನೋವಿನಲ್ಲೇ ನನ್ನ ಕೆನ್ನೆಗೆ ಬಾರಿಸಿದಳು. ಸ್ಟಾಪ್​ ನಾನ್ಸೆಸ್​ ಎಂದು ಬೈದಳು. ಆಕೆ ತುಂಬಾ ನೋವಿನಲ್ಲಿದ್ದಳು. ರೀನಾ ತನ್ನ ಕೈಯನ್ನು ನೋವಿನಿಂದ ಕಚ್ಚಿಕೊಂಡಿದ್ದಳು ಎಂದು ಅಮೀರ್ ಖಾನ್…

Read More

ಪ್ರಸ್ತುತ ದುಬೈನಲ್ಲಿರುವ ವಿಮಾನ ನಿಲ್ದಾಣಕ್ಕಿಂತ 5 ಪಟ್ಟು ದೊಡ್ಡದಾದ ಬೃಹತ್‌ ವಿಮಾನ ನಿಲ್ದಾಣ ಮಾಡಲು ಯೋಜಿಸಲಾಗಿದೆ. ಈ ಬಗ್ಗೆ ದುಬೈ ಆಡಳಿತಗಾರ ಶೇಖ್‌ ಮೊಹ ಮ್ಮದ್‌ ಬಿನ್‌ ರಶೀದ್‌ ಅಲ್‌ ಮಕೊಮ್‌ ಘೋಷಿಸಿದ್ದಾರೆ. ಸುಮಾರು 2.9 ಲಕ್ಷ ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಿದ್ದು, ಮುಂದಿನ 10 ವರ್ಷದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಹೇಳಿದ್ದಾರೆ. ಹೊಸ ನಿಲ್ದಾಣಕ್ಕೆ ಅಲ್‌ ಮಕೊಮ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಲಾಗುವುದು. ಪ್ರಸ್ತುತ ದುಬೈಯಲ್ಲಿರುವ ವಿಮಾನ ನಿಲ್ದಾಣ ವಿಶ್ವದ ಅತೀ ದೊಡ್ಡ ನಿಲ್ದಾಣ ವಾಗಿದೆ. ದುಬೈ ನಗರವನ್ನು ವಿಮಾನ ಮತ್ತು ಹಡಗು ಹಬ್‌ ಮಾಡಬೇಕು ಎಂಬ ಹಂಬಲದಂತೆ ಅದನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.

Read More

ಹಿಂದಿಯ ಖ್ಯಾತ ರಿಯಾಲಿಟಿ ಶೋ ‘ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ’ಗೆ ನಟ ಆಮೀರ್ ಖಾನ್ ಆಗಮಿಸಿದ್ದಾರೆ. ಈ ವೇಳೆ ಪಂಜಾಬ್ ಜನರ ನಮ್ರತೆಯನ್ನು ನಟ ಮೆಚ್ಚಿ ಮಾತನಾಡಿದ್ದಾರೆ. ನಾನು ಮುಸ್ಲಿಂನಾಗಿರುವುದರಿಂದ ಕೈ ಜೋಡಿಸಿ ಜನರಿಗೆ ನಮಸ್ತೆ ಹೇಳುವ ಅಭ್ಯಾಸವಿರಲಿಲ್ಲ. ಪಂಜಾಬ್‌ನಲ್ಲಿ ಚಿತ್ರೀಕರಣಕ್ಕೆಂದು ಹೋಗಿ ಅಲ್ಲಿ ಎರಡೂವರೆ ತಿಂಗಳುಗಳನ್ನು ಕಳೆದ ನಂತರ, ನನಗೆ ನಮಸ್ತೆ ಎಂದು ಕೈ ಮುಗಿದು ಹೇಳುವ ಶಕ್ತಿ ಅರ್ಥವಾಯಿತು ಎಂದಿದ್ದಾರೆ. ‘ದಂಗಲ್’ ಸಿನಿಮಾವನ್ನು ಪಂಜಾಬ್‌ನಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿಯ ಜನರನ್ನು ನಿಜವಾಗಿಯೂ ಇಷ್ಟಪಟ್ಟೆ. ಪಂಜಾಬಿ ಸಂಸ್ಕೃತಿಯು ಪ್ರೀತಿಯಿಂದ ತುಂಬಿದೆ. ‘ದಂಗಲ್’ ಸಿನಿಮಾಗಾಗಿ ನಾವು ಅಲ್ಲಿ ಹೋದಾಗ ಚಿತ್ರೀಕರಣ ಮಾಡುತ್ತಿದ್ದ ಸ್ಥಳ ಒಂದು ಪಟ್ಟ ಹಳ್ಳಿಯಾಗಿದ್ದು, ನಾವು ಆ ಸ್ಥಳದಲ್ಲಿ ಮತ್ತು ಆ ಮನೆಯಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಶೂಟ್ ಮಾಡಿದ್ದೇವೆ ಎಂದರು. ಪಂಜಾಬ್ ನಲ್ಲಿ ಶೂಟ್‌ಗೆಂದು ಬೆಳಗ್ಗೆ 5 ಗಂಟೆಗೆ ಕಾರ್‌ನಲ್ಲಿ ತಲುಪುತ್ತಿದ್ದಾಗ ಜನ ನನಗೆ ಕೈ ಮುಗಿದು ಸ್ವಾಗತಿಸುತ್ತಿದ್ದರು. ಮನೆಯ ಹೊರಗೆ ನಿಂತು ನಮಸ್ತೆ…

Read More

ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾದ ನಟಿ ಅಮಲಾ ಪೌಲ್ ಸದ್ಯ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅಮಲಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತೆರೆಹಿಂದಿನ ಫೋಟೋಶೂಟ್‌ನ ವಿಡಿಯೋವೊಂದನ್ನು ನಟಿ ಶೇರ್ ಮಾಡಿದ್ದಾರೆ. ಇತ್ತೀಚೆಗೆ ಅಮಲಾ ಅವರ ನಟಿಯ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿತ್ತು. ಈಗ ಕೆಂಪು ಬಣ್ಣದ ಗೌನ್ ಧರಿಸಿ ಫೋಟೋಶೂಟ್ ಮಾಡಿದ್ದಾರೆ. ಕ್ಯಾಮೆರಾಗೆ ಬೇಬಿ ಬಂಪ್ ಲುಕ್ ತೋರಿಸಿದ್ದಾರೆ. ವಿಡಿಯೋದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ನವೆಂಬರ್ 5ರಂದು ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ಅಮಲಾ ಪೌಲ್ ಮದುವೆಯಾಗಿದ್ದರೆ. ಹಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಜೋಡಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Read More

ಶ್ರೀಲಂಕಾದಲ್ಲಿ ಸೀತಾಮಾತೆ ದೇಗುಲ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಈ ದೇಗುಲಕ್ಕೆ ಭಾರತದ ಸರಯೂ ನದಿಯಿಂದ ಪವಿತ್ರ ನೀರನ್ನು ರವಾನೆ ಮಾಡಲಾಗಿದೆ. ಸೀತಾ ದೇವಿಗೆ ಸಮರ್ಪಿತವಾಗಿರುವ ಸೀತಾ ಅಮ್ಮನ ದೇವಾಲಯದ ಪವಿತ್ರ ಕಾರ್ಯಕ್ರಮಕ್ಕಾಗಿ ಶ್ರೀಲಂಕಾಕ್ಕೆ ಪವಿತ್ರ ಸರಯೂ ನದಿ ನೀರನ್ನು ಕಳುಹಿಸುವ ಪ್ರಕ್ರಿಯೆಯನ್ನು ಭಾರತ ಪ್ರಾರಂಭಿಸಿದೆ. ಮೇ 19 ರಂದು ಸೀತಾ ಅಮ್ಮನವರ ದೇವಸ್ಥಾನದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಶ್ರೀಲಂಕಾದ ಪ್ರತಿನಿಧಿಗಳು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದ ಪತ್ರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಧಾರ್ಮಿಕ ಸಮಾರಂಭಗಳಿಗೆ ಸರಯೂ ನದಿ ನೀರು ಮತ್ತು ದೇವಾಲಯದಲ್ಲಿ ಸೀತಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲು ವಿನಂತಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆಗೆ ಪವಿತ್ರ ಜಲವನ್ನು ಸಾಗಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ಶ್ರೀಲಂಕಾ ಮತ್ತು ಉತ್ತರ ಪ್ರದೇಶ ಸರ್ಕಾರದ ಕಾರ್ಯವನ್ನು ಅಯೋಧ್ಯ ರಾಮಜನ್ಮಭೂಮಿ ಟ್ರಸ್ಟ್ ಶ್ಲಾಘಿಸಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸುವಲ್ಲಿ…

Read More

ಇಂದು ನಟಿ ಸಮಂತಾ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.  ಈ ವೇಳೆ, ಸಮಂತಾ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕೈಯಲ್ಲಿ ಗನ್ ಹಿಡಿದು ರಕ್ತಸಿಕ್ತ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದು, ಸ್ಯಾಮ್ ನಟನೆಯ ಹೊಸ ಸಿನಿಮಾದ ಪೋಸ್ಟರ್‌ ರಿವೀಲ್‌ ಆಗಿದೆ. ಸಮಂತಾ ನಟನೆಯ ‘ಬಂಗಾರಮ್’ ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ. ಕೈಯಲ್ಲಿ ಗನ್ ಹಿಡಿದು ಖಡಕ್ ಆಗಿ ಲುಕ್ ಕೊಟ್ಟಿದ್ದಾರೆ. ಹಣೆಯಲ್ಲಿ ಕುಂಕುಮ ಕತ್ತಲ್ಲಿ ತಾಳಿ ಕೆಂಪು ಬಣ್ಣದ ಸೀರೆಯುಟ್ಟು ರಕ್ತಸಿಕ್ತ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ‘ಬಂಗಾರಮ್’ ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಶುರು ಆಗಲಿದೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಪೋಸ್ಟರ್ ನೋಡಿದ್ರೆ ಇದೊಂದು ಆ್ಯಕ್ಷನ್ & ಮಾಸ್ ಸಿನಿಮಾ ಎಂಬುದು ತಿಳಿಯುತ್ತಿದೆ. ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಸ್ಯಾಮ್ ನ್ಯೂ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Read More

ಬಾಲಿವುಡ್ ನಟ ರಣ್‌ಬೀರ್ ಕಪೂರ್ ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಭರಣ ಮಳಿಗೆಯೊಂದಕ್ಕೆ ರಣಬೀರ್ ಚಾಲನೆ ನೀಡಿದ್ದಾರೆ. ಈ ವೇಳೆ ರಣ್‌ಬೀರ್ ವೇದಿಕೆ ಮೇಲಿದ್ದಾಗ ಫೋಟೋಗ್ರಾಫರ್ ಅಶ್ಲೀಲ ಪದ ಬಳಸಿ ಮಾತನಾಡಿದ್ದು ಕೇಳಿ ಶಾಕ್ ಆಗಿದ್ದಾರೆ. ರಣ್‌ಬೀರ್ ವೇದಿಕೆಗೆ ಎಂಟ್ರಿ ಕೊಟ್ಟಾಗ ಬೇಗನೆ ಫೋಟೋ ಕ್ಲಿಕ್ಕಿಸಬೇಕೆಂಬ ತವಕದಲ್ಲಿದ್ದ ಫೋಟೋಗ್ರಾಫರ್ ಕೆಟ್ಟ ಪದ ಬಳಸಿದ್ದಾರೆ. ಆ ಪದ ಬಳಕೆ ಮಾಡಿದ್ದು, ರಣ್‌ಬೀರ್ ಅವರಿಗೇನಾ ಅಥವಾ ಸೇರಿದ್ದ ಜನರಿಗೇನಾ? ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ನಲ್ಲಿ ಫೋಟೋಗ್ರಾಫರ್ ವರ್ತನೆ ರಣ್‌ಬೀರ್‌ಗೆ ಕೋಪ ತರಿಸಿದೆ. ರಣ್‌ಬೀರ್ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ಖಡಕ್ ಆಗಿ ಲುಕ್ ಕೊಟ್ಟು ವೇದಿಕೆಯಿಂದ ಹೊರನಡೆದಿದ್ದಾರೆ. ವೈರಲ್‌ ಆಗಿರುವ ವಿಡಿಯೋ ನೋಡಿ ಫೋಟೋಗ್ರಾಫರ್ ವರ್ತನೆಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಎಲ್ಲಿ ಹೇಗಿರಬೇಕು ಎಂಬ ಸೌಜನ್ಯವಿಲ್ಲ ಎಂದು ಖಡಕ್ ಆಗಿ ಪಾಪರಾಜಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

Read More

ಇನ್ನು ಒಂದು ವರ್ಷದೊಳಗೆ ಇಡೀ ಏಷ್ಯಾದಾದ್ಯಂತ ಕಾಲ್ ಸೆಂಟರ್ ಗಳು ಬಂದ್ ಆಗಲು ಕೃತಕ ಬುದ್ಧಿಮತ್ತೆ ಕಾರಣವಾಗುತ್ತದೆ ಎಂದು ಟಿಸಿಎಸ್ ಸಿಇಒ ಕೆ ಕೃತಿವಾಸನ್ ತಿಳಿಸಿದ್ದಾರೆ. ಫೈನಾನ್ಷಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸುಧಾರಿತ ಕೃತಕ ಬುದ್ಧಿಮತ್ತೆಯು ಉದ್ಯೋಗ ಕಡಿತದ ಮೇಲೆ ಪ್ರಭಾವ ಬೀರಲಿದೆ. ಇಂದು ಎಲ್ಲ ದೇಶಗಳು ಕೃತಕ ಬುದ್ಧಿಮತ್ತೆಯನ್ನು ಹೆಚ್ಚೆಚ್ಚು ಬಳಸಿಕೊಳ್ಳುತ್ತಿವೆ. ಇದು ಉದ್ಯೋಗ ಕಡಿತವಾಗಲು ಕಾರಣವಾಗುತ್ತಿವೆ. ಕಾಲ್ ಸೆಂಟರ್ಗಳ ಮೇಲೆ ಎಐ ದುಷ್ಪರಿಣಾಮ ಬೀರಲಿವೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಕಾಲ್ ಸೆಂಟರ್ಗಳು ಬಾಗಿಲು ಮುಚ್ಚಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಇತ್ತೀಚಿಗೆ ಮಾಧ್ಯಮಗಳಿಗೆ ಮಾತನಾಡಿದ್ದ ಲಿಂಕ್ಡ್‌ ಇನ್‌ನ ಮುಖ್ಯ ಉತ್ಪನ್ನ ಅಧಿಕಾರಿ ಟೊಮರ್‌ ಕೋಹೆನ್‌ ಅವರು ಭಾರತದಲ್ಲಿನ ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆ (ಎಐ) ಪ್ರಭಾವ ಬೀರಲಿದೆ ಎಂದು ಹೇಳಿದ್ದರು. ಭಾರತೀಯ ವೃತ್ತಿಪರರು ಜಾಗತಿಕವಾಗಿ ಎಲ್ಲರಿಗಿಂತಲೂ ಹೆಚ್ಚಾಗಿ ಕೃತಕ ಬುದ್ಧಿಮತ್ತೆ ಕೌಶಲ್ಯಗಳನ್ನು ಬಳಸುತ್ತಾರೆ. ಲಿಂಕ್ಡ್‌ಇನ್‌ನಲ್ಲಿ ಕೃತಕ ಬುದ್ಧಿಮತ್ತೆ ಸಂಬಂಧಿತ ಉದ್ಯೋಗದ ಉಲ್ಲೇಖಗಳು…

Read More