ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಜೆಡಿಎಸ್ ನಾಯಕರಿಗೆ ಡಿಸ್ಟಾರ್ಬ್ ಮಾಡಿದೆ.ಈ ಹಿನ್ನಲೆಯಲ್ಲಿ ದಳಪತಿಗಳಿಗೆ ಧೈರ್ಯ ತುಂಬಿರುವ ಅಮಿತ್ ಷಾ,ನಿಮ್ಮಜೊತೆ ನಾವಿದ್ದೇವೆ ಎಂದಿದ್ದಾರೆ.ಇನ್ನು ಈ ಪ್ರಕರಣ ರಾಜಕೀಯ ಕೆಸರರೆಚಾಟಕ್ಕೂ ಕಾರಣವಾಗಿದೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಜೆಡಿಎಸ್ ನಾಯಕರಿಗೆ ದೊಡ್ಡ ಶಾಕ್ ಕೊಟ್ಟಿದೆ. ದೇವೇಗೌಡ್ರು, ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಡಿಸ್ಟಾರ್ಬ್ ಆಗಿದ್ದಾರೆ. ಈ ಹಿನ್ನಲೆಯಲ್ಲಿ ಜೆಡಿಎಸ್ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಧೈರ್ಯ ತುಂಬಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಮಿತ್ ಷಾ ಭೇಟಿ ಮಾಡಿರುವ ಹೆಚ್ಡಿಕೆ,ಪೆನ್ ಡ್ರೈವ್ ಪ್ರಕರಣ ಬಗ್ಗೆ ಚರ್ಚೆ ಮಾಡಿದ್ದಾರೆ.
ನಿಮ್ಮ ಜೊತೆ ನಾವಿದ್ದೇವೆ ಎಂದು ದಳಪತಿಗಳಿಗೆ ಅಮಿತ್ ಷಾ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ಸಂತ್ರಸ್ತೆಯ ಕಿಡ್ನ್ಯಾಪ್ ಕೇಸಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಂಧನ ಆಗಿದೆ.. ಆದ್ರೆ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿರೋ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ ಐಟಿ ನಾನಾ ಕಸರತ್ತು ನಡೆಸ್ತಿದೆ.. ಈಗಾಗಲೇ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಿ ರಾಜ್ಯಕ್ಕೆ ಕರೆತರೋ ಪ್ರಯತ್ನ ಕೂಡ ನಡೀತಿದೆ. ಸಹಜವಾಗಿ ಜೆಡಿಎಸ್ ನವರಿಗೆ ಬೇಸರ ಆಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬಿಸಿಲ ಉರಿಗೆ ಬೆಂದ ಜನರು.! ಬಿಸಿಲ ಬೇಗೆಯಿಂದ ಪಾರಾಗಲು ಹೀಗೆ ಮಾಡಿ ಸಾಕು..
ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣವನ್ನ ಡಿಸಿಎಂ ಡಿ.ಕೆ ಶಿವಕುಮಾರ್, ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕುಮಾರಸ್ವಾಮಿಯವರನ್ನ ಅಮಿತ್ ಶಾ ಯಾವ ಕಾರಣಕ್ಜೆ ಭೇಟಿ ಮಾಡಿದ್ರು ಎಂಬುದು ಗೊತ್ತಾಗಬೇಕಿದೆ. ಎಸ್ ಐಟಿ ತನಿಖೆ ವಿಚಾರದಲ್ಲಿ ರಾಜಕೀಯ ಇಲ್ಲ. ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು. ಇದರಲ್ಲಿ ಯಾರೂ ಖುಷಿ ಪಡುವ ವಿಚಾರವಿಲ್ಲ.
ದೇವೇಗೌಡ್ರು ನಮಗೂ ನಾಯಕರು ಅಂತಾ ಸಚಿವ ಚೆಲುವರಾಯಸ್ವಾಮಿ ಹೇಳಿದ್ರು.ಕಾನೂನು ಪ್ರಕಾರ ಕ್ರಮ ಕೈಗುತ್ತೆ.. ಈವಾಗ ಅರೆಸ್ಟ್ ಮಾಡಿದ್ದಾರೆ. ಮುಂದೆ ಆ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.ಅಲ್ದೇ ಪ್ರಜ್ವಲ್ ರೇವಣ್ಣ ಪಾತಾಳದಲ್ಲೂ ಇದ್ದರೂ ಅರೆಸ್ಟ್ ಮಾಡ್ತೀವಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.