ತೆಂಗಿನ ಮರ ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಹಾವಳಿ ಬಾರಿ ಹೆಚ್ಚಾಗುತ್ತಿದ್ದು ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲ ಆರಂಭಿಸಿದ್ದಾರೆ ಹೀಗೆ ಮುಂದುವರೆದರೆ ರೈತರಿಗೆ ಸಸಿ ನೀಡುವುದೇ ಕೆಲಸವಾದರೂ ಅಚ್ಚರಿ ಇಲ್ಲ ಇದನ್ನು ಸರಿಯಾಗಿ ಅದ್ದುಬಸ್ತಿಗೆ ತಾರದೆ ಇದ್ದರೆ ಇಲ್ಲ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬರಬಹುದು
ತೆಂಗಿನ ಮರಗಳಿಗೆ ಬರುವ ಎಲ್ಲಾ ರೋಗಗಳಿಂದಲೂ ಕೀಟಗಳಿಂದಲೂ ಪ್ರಬಲವಾದದ್ದು ಕೆಂಪು ಮೂತಿ ದುಂಬಿ ಕಾಟ ರಾಜ್ಯದ ಎಲ್ಲಾ ತೆಂಗು ಬೆಳೆಯುವ ಪ್ರದೇಶಗಳಲ್ಲಿ ರೈತರಿಗೆ ಅತಿ ದೊಡ್ಡ ಸಮಸ್ಯೆ ಇದು ಕೆಲವರಿಗೆ ತೆಂಗಿನ ಮರ ಸಸಿಗಳು ಸಾಯುತ್ತವೆ ಯಾಕೆ ಸಾಯುತ್ತವೆ ಯಾವುದಾದರೂ ಕಳ್ಳ ಮಾರ್ಗದ ಮೂಲಕ ತೆಂಗಿನ ಮರ ಸಸಿಗೆ ದಾಳಿ ಮಾಡುವ ಕೀಟ ಬಂದದ್ದೆ ಗೊತ್ತಾಗುವುದಿಲ್ಲ ಬದುಕಿಸಲು ಸಾಧ್ಯವೇ ಇಲ್ಲ
ಸಾವಯವ ಗೊಬ್ಬರ, ಔಷಧ ಬಳಸಿ ಬಾಳೆ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ರೈತ
ಯಾವ ಕಾರಣಕ್ಕೆ ಕೀಟ ಬರುತ್ತದೆ
ಯಾವುದೇ ಒಂದು ಕೀಟಾ ರೋಗಾನು ಸಂಖ್ಯಾಭಿವೃದ್ಧಿ ಹೆಚ್ಚಳವಾಗಿದೆ ಎಂದರೆ ಅದರ ಸಂತತಿ ಹೆಚ್ಚಳಕ್ಕೆ ಅನುಕೂಲವಾಗುವ ಸನ್ನಿವೇಶ ಏರ್ಪಟ್ಟಿದ್ದೆ ಒಂದು ನಾವು ಅವುಗಳ ಸಂತತಿಯ ಹೆಚ್ಚಳಕ್ಕೆ ಅನುಕೂಲ ಕಲ್ಪಿಸಿ ಕೊಟ್ಟಿದ್ದೇವೆ ಅಥವಾ ಅವುಗಳಿಗೆ ಬೇಕಾಗುವ ಆಹಾರ ಯಥೇಚ್ಛವಾಗಿ ಸಿಕ್ಕಿದೆ ಎಂದು ಅರ್ಥ ಸೋರುತ್ತದೆ ತೆಂಗಿನ ಮರದ ಯಾವುದೇ ಹಸಿಬಾಗವನ್ನು ಕಡಿಯಬಾರದು. ಕಾರಣ ಅದರ ಯಾವುದೇ ಹಸಿಬಾಗ ಕಡಿದಾಗ ಅದರಲ್ಲಿ ಒಂದು ರಸ ತೋರುತ್ತದೆ ನಿಹವಳಿಗೆ ಕೆಂಪು ಮೂತಿ ದುಂಬಿ ಬರುತ್ತದೆ
ಎಳನೀರಿನ ಸಿಪ್ಪೆ ಮತ್ತು ಅದರ ನಿರ್ವಹಣೆ
ಕೊಳೆಯುವ ಯಾವ ವಸ್ತುಗಳಿದ್ದರೂ ಅದರ ವಾಸನೆಗೆ ಕೆಂಪು ಮೂತಿ ದುಂಬಿ ಹುಡುಕಿಕೊಂಡು ಬರುತ್ತದೆ ಹಿಂದೆ ಜನ ಎಳನೀರು ಬಳಕೆ ಮಾಡಿದ್ದು ಉಂಟು. ಬಳಕೆ ಮಾಡಿದರು ಅದರ ಒಡೆದ ಗಂಜಿ ತಿಂದು ಅಥವಾ ಎಳೆಯದಾಗಿದ್ದರೆ ಅದನ್ನು ಮೆದು ಚಿಪ್ಪನ್ನು ತಿಂದು ಉಳಿದ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿದ್ದರು ಈಗ ಆಗಿಲ್ಲ ಬಿಸಿ ನೀರು ಕಾಯಿಸುವ ಕ್ರಮ ಕಡಿಮೆಯಾಗಿದೆ, ಎಳನೀರು ಕುಡಿದು ಅದರ ಒಳಗಿನ ಗಂಜಿ ತಿನ್ನುವುದಕ್ಕೂ ವ್ಯವಧಾನ ಇಲ್ಲ ಅದನ್ನು ಹಾಗೆ ಬಿಸಾಡುತ್ತಾರೆ ಇದರಿಂದ ಇತರ ಹಾನಿ ಉಂಟಾಗುತ್ತಿದೆ