ರಾಯಚೂರು: ಜಿಲ್ಲೆಯಲ್ಲಿ ಕಳೆದ ವಾರದಿಂದ 42-46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವ ಮಧ್ಯೆಯೇ 24 ತಾಸುಗಳ ಅವಧಿಯಲ್ಲಿ ಬಿರುಬಿಸಿಲಿನ ಅಡ್ಡ ಪರಿಣಾಮದಿಂದ ಜಿಲ್ಲೆಯ ರಾಯಚೂರು, ಸಿಂಧನೂರು ಹಾಗೂ ಮಸ್ಕಿ ತಾಲೂಕುಗಳಲ್ಲಿ ಒಟ್ಟು 6 ಜನ ಮೃತಪಟ್ಟಿದ್ದು ತೀವ್ರ ಆತಂಕ ಹುಟ್ಟಿಸಿದೆ. ಸಿಂಧನೂರು ತಾಲೂಕಿನ ಹುಡಾ ಗ್ರಾಮದ ಪ್ರದೀಪ್ ಪೂಜಾರಿ (18),
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ಗಂಗಮ್ಮ (67), ದುರುಗಮ್ಮ ಉಪ್ಪಾರ್(69), ವೀರೇಶ ಮಡಿವಾಳ(67) ಅವರು ಮೃತಪಟ್ಟಿದ್ದಾರೆ. ಆ ಪೈಕಿ ಇಬ್ಬರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರೆ, ಒಬ್ಬ ಮಹಿಳೆ ಕ್ಯಾನ್ಸರ್ ಪೀಡಿತರಾಗಿದ್ದರು. ಮತ್ತೊಬ್ಬರು ಹುಟ್ಟು ವಿಕಲಚೇತನರಾಗಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆಯ ತಾಲೂಕಾಧಿಕಾರಿ ಡಾ. ಅಯ್ಯನಗೌಡ ತಿಳಿಸಿದ್ದಾರೆ.