ಶಿವಮೊಗ್ಗ:- ಗೀತಾ ಶಿವರಾಜ್ ಕುಮಾರ್ ಓರ್ವ ದುರ್ಬಲ ಅಭ್ಯರ್ಥಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಮತ ಚಲಾಯಿಸಿ ಮಾತನಾಡಿದ ಅವರು, ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಬೆಂಬಲ ತನಗಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಹ ತಾನೇ ಸೂಕ್ತ ವ್ಯಕ್ತಿ ಅಂತ ಪರಿಗಣಿಸಿದ್ದು, ಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿ ನರೇಂದ್ರ ಮೋದಿಯವರ ಪರ ಕೈ ಎತ್ತುತ್ತೇನೆ ಎಂದರು.
Lokasabha Election: ಕುಟುಂಬ ಜೊತೆ ಆಗಮಿಸಿ ಮತದಾನ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್..!
ಸೋಲು ಖಚಿತ ಅಂತ ಗೊತ್ತಾಗಿ ರಾಘವೇಂದ್ರ, ಈಶ್ವರಪ್ಪನವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಅಂತ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಜನರ ಮುಂದೆ ಇಂಥ ಷಡ್ಯಂತ್ರಗಳೆಲ್ಲ ನಡೆಯಲ್ಲ, ಜನರಿಗೆ ಮನಸ್ಸಲ್ಲಿ ತನ್ನ ಚಿಹ್ನೆ ಅಚ್ಚು ಹಾಕಿದೆ ಎಂದು ಈಶ್ವರಪ್ಪ ಹೇಳಿದರು. ಯಡಿಯೂರಪ್ಪ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ಗೀತಾ ಶಿವರಾಜ್ ಕುಮಾರ್ ಅವರನ್ನು ಹಾಕಿಸಿಕೊಂಡಿದ್ದಾರೆ, ಅವರೊಬ್ಬ ದುರ್ಬಲ ಅಭ್ಯರ್ಥಿ ಎಂದ ಈಶ್ವರಪ್ಪ, ಮತದಾರರಿಗೆ ರಾಘವೇಂದ್ರ ಮತ ಚಲಾಯಿಸಲು ಮನಸ್ಸಿಲ್ಲ ಹಾಗಾಗಿ ತಾನೇ ಗೆಲ್ಲೋದು ಎಂದು ಹೇಳಿಕೆ ನೀಡಿದ್ದಾರೆ.