ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಅತೀ ಕಡಿಮೆ ವೋಟಿಂಗ್ ದಾಖಲಾಗಿದ್ದು, ಬೆಂಗಳೂರಿಗರ ಬೇಜವಾಬ್ದಾರಿಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಬೆಂಗಳೂರಿನಲ್ಲಿ ವೋಟ್ ಮಾಡದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬ್ಯಾನರ್ಗಳು ರಾರಾಜಿಸುತ್ತಿವೆ.
ಬಾಗಲಕೋಟೆ: ಹಾಲಿ ಸಂಸದ ಪಿ ಸಿ ಗದ್ದಿಗೌಡರ ಸಾಧನೆ ಝೀರೋ ಇದೆ – ಸಿದ್ದರಾಮಯ್ಯ !
ನಿನ್ನೆ ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರಿನಲ್ಲೇ ಅತೀ ಕಡಿಮೆ ಮತದಾನ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 67.28 ವೋಟಿಂಗ್ ದಾಖಲಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ 52.81ರಷ್ಟು ವೋಟಿಂಗ್, ಬೆಂಗಳೂರು ಉತ್ತರದಲ್ಲಿ 54.42ರಷ್ಟು ಮತದಾನ ದಾಖಲಾಗಿದೆ. ಇದು 14 ಕ್ಷೇತ್ರಗಳ ಪೈಕಿ ಅತ್ಯಂತ ಕಡಿಮೆ ಮತದಾನವಾಗಿದೆ
ರಾಜಧಾನಿ ಬೆಂಗಳೂರು ವಲಸೆ ನಿವಾಸಿಗಳ ವಿರುದ್ಧ ಇಲ್ಲಿನ ನಾಗರಿಕರು ಕಿಡಿಕಾರಿದ್ದಾರೆ. ಪ್ರತೀ ಸಲದ ಚುನಾವಣೆಯಂತೆ ಈ ಬಾರಿ ಚುನಾವಣೆಗೂ ಬೆಂಗಳೂರಿನ ವಲಸಿಗರು ಕೈಕೊಟ್ಟಿದ್ದಾರೆ. ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದೂ, ಇಲ್ಲಿ ಮತದಾನ ಮಾಡುವ ಹಕ್ಕಿದ್ರೂ ವೋಟ್ ಮಾಡದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿದ್ದೂ, ಬೆಂಗಳೂರಿನಲ್ಲಿ ಮತದಾನದ ಹಕ್ಕಿದ್ದರೂ ವೋಟ್ ಮಾಡದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಲಾಗಿದೆ. ಬದುಕಿದ್ದು ಸತ್ತಂತೆ ವರ್ತಿಸಿ ಮತದಾನ ಮಾಡದಿರೋದಕ್ಕೆ ಬೇಸರ ವ್ಯಕ್ತವಾಗಿದೆ.
ಮತಹಾಕದವರಗೆ ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿ ಶ್ರದ್ಧಾಂಜಲಿ ಅರ್ಪಣೆ ಮಾಡಲಾಗಿದೆ. ಮತದಾನಕ್ಕಾಗಿ ಚುನಾವಣಾ ಆಯೋಗ ಬೀದಿ ಬೀದಿ ಪ್ರಚಾರ ಮಾಡಿದ್ರೂ ವೋಟ್ ಮಾಡದೆ ನಿರ್ಲಕ್ಷ್ಯ ತೋರಿದ, ಬದುಕಿದ್ದರೂ ಸತ್ತಂತೆ ವರ್ತಿಸಿದ ಸತ್ತ ಪ್ರಜೆಗಳಿಗೆ ನಮ್ಮ ಶ್ರದ್ದಾಂಜಲಿ ಅಂತ ಬ್ಯಾನರ್ ಹಾಕಲಾಗಿದೆ.