ಗದಗ: ನಮ್ಮ ತೆರಿಗೆ ನಮ್ಮ ಹಕ್ಕು ಕುರಿತು ಜೆಡಿಎಸ್ ನಿಂದ ಸುದ್ದಿಗೋಷ್ಠಿ ನಡೆಸಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ರಿಂದ ಗದುಗಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಅಂತಿರಾ ನಮ್ಮ ಹಣ ನಮಗೆ ಕೊಡಿ.. ಗದಗದಿಂದ ರಾಜ್ಯ ಸರ್ಕಾರಕ್ಕೆ ೫೦೦ ಕೋಟಿ ರೂ ಹೋಗುತ್ತೆ. ನಮ್ಮ ಗದಗ ಜಿಲ್ಲೆಗೆ ಯಾಕೆ ೨೦ಕೋಟಿ ಬಿಡುಗಡೆ ಮಾಡಿದ್ರಿ,
೫೦೦ ಕೋಟಿ ಹಣ ನಮ್ಮ ಜಿಲ್ಲೆ ಕೊಡಿ ಅಂತ ಗೋವಿಂದಗೌಡ್ರ ಆಗ್ರಹ ಮಾಡಿದ್ದಾರೆ. ಅನುದಾನ ಬಿಡುಗಡೆಯಲ್ಲಿ ನಮ್ಮ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ನಾಳೆ ಈ ಅನ್ಯಾಯ ಖಂಡಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಕೊಡ್ತೇವೆ. ಗಾಂಧಿ ಸರ್ಕಲ್ ನಿಂದ ಉಲ್ಟಾ ನಡೆದು ಪಾದಯಾತ್ರೆ ಮಾಡಿ ಮನವಿ ಕೊಡ್ತೇವಿ. ತಮ್ಮ ರಾಜಕಾರಣದ ಬೆಳೆ ಬೇಯಿಸಿಕೊಳ್ಳುವ ಸಲುವಾಗಿ ಗದಗ ಜಿಲ್ಲೆ ಬಲಿ ಕೊಡುತ್ತಿದ್ದಾರೆ ಅಂತಾ ಕಿಡಿ ಕಾರಿದ್ದಾರೆ.