ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟ್ರೇಡಿಯಂನಲ್ಲಿ ಬುಧವಾರ ನಡೆದ ಆತಿಥೇಯ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್ಜಿ 10 ವಿಕೆಟ್ಗಳ ಹೀನಾಯ ಸೋಲನುಭವಿಸಲು ಪ್ರಮುಖ ಬ್ಯಾಟರ್ಗಳ ನಿಧಾನ ಗತಿಯ ಬ್ಯಾಟಿಂಗ್ ಕಾರಣ ಎಂದು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಜಾಡಿಸಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಎಲ್ಎಸ್ಜಿ ತಂಡ ಆರಂಭದಲ್ಲಿ ಕ್ವಿಂಟನ್ ಡಿ ಕಾಕ್ (2) ಮತ್ತು ಮಾರ್ಕಸ್ ಸ್ಟೋಯ್ನಿಸ್ (3) ವಿಕೆಟ್ ಕಳೆದುಕೊಂಡಿತು. ಬಳಿಕ 3ನೇ ವಿಕೆಟ್ಗೆ ಜೊತೆಯಾದ ಕೆಎಲ್ ರಾಹುಲ್ (29 ಎಸೆತಗಳಲ್ಲಿ 33 ರನ್) ಮತ್ತು ಕೃಣಾಲ್ ಪಾಂಡ್ಯ (21 ಎಸೆತಗಳಲ್ಲಿ 24 ರನ್) ಇದು ಟಿ20 ಕ್ರಿಕೆಟ್ ಎಂಬುದನ್ನು ಮರೆತು ಆಮೆಗತಿಯಲ್ಲಿ ಬ್ಯಾಟ್ ಮಾಡಿದ್ದೇ ಎಲ್ಎಸ್ಜಿ ಸೋಲಿಗೆ ಪ್ರಮುಖ ಕಾರಣ ಎಂದು ಪಾರ್ಥಿವ್ ಪಟೇಲ್ ಟೀಕಿಸಿದ್ದಾರೆ. ಈ ಇಬ್ಬರು ಆಟಗಾರರೇ ಸೋಲಿಗೆ ನೇರ ಹೊಣೆ ಎಂದು ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
“ಪವರ್ ಪ್ಲೇ ಓವರ್ಗಳಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಯಾವಾಗ ಕೇವಲ 27 ರನ್ ಮಾತ್ರವೇ ಗಳಿಸಿತ್ತೋ ಆಗಲೇ ಪಂದ್ಯವನ್ನು ಸೋತಾಗಿತ್ತು. ರನ್ ಕಲೆಹಾಕದೇ ಸನ್ರೈಸರ್ಸ್ ಹೈದರಾಬಾದ್ ಅಂತಹ ಬ್ಯಾಟಿಂಗ್ ಬಲಿಷ್ಠ ತಂಡಕ್ಕೆ ಸವಾಲೊಡ್ಡಲು ಸಾಧ್ಯವೇ ಇಲ್ಲ. ಅದರಲ್ಲೂ ಫೀಲ್ಡಿಂಗ್ಗೆ ನಿರ್ಬಂಧಗಳಿರುವಾಗ ಪವರ್ ಪ್ಲೇ ಓವರ್ಗಳ ಲಾಭ ತೆಗೆದುಕೊಳ್ಳಲೇಬೇಕು. ಇದರ ಹೊರತಾಗಿಯೂ ಸ್ಲಾಗ್ ಓವರ್ಗಳಲ್ಲಿ ನಿಕೋಲಸ್ ಪೂರನ್ ಮತ್ತು ಆಯುಶ್ ಬದೋನಿ ಅತ್ಯುತ್ತಮವಾಗಿ ಬ್ಯಾಟ್ ಮಾಡಿದರು. ಆದರೂ ತಂಡ ಸಾಧಾರಣ ಸ್ಕೋರ್ ಮಾತ್ರವೇ ಗಳಿಸಿತ್ತು,” ಎಂದು ಜಿಯೋ ಸಿನೆಮಾ ಕಾರ್ಯಕ್ರಮದಲ್ಲಿ ಪಾರ್ಥಿವ್ ಪಟೇಲ್ ಮಾತನಾಡಿದ್ದಾರೆ.