ಬಾಗಲಕೋಟೆ: ಮಹಾಲಿಂಗಪೂರ ಭ್ರೂಣ ಹತ್ಯೆ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ ಮತ್ತೊಂದು ಶಿಶುವಿನ ಮರಣ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಶಿರೂರು ಅಗಸಿಯಲ್ಲಿ ಬಾಕ್ಸ್ ನಲ್ಲಿ ಪಾಪಿಗಳು ಮಗುವನ್ನು ಎಸೆದು ಹೋಗಿದ್ದರು. ಈ ವೇಳೆ ಸ್ಥಳೀಯರು ಬಾಕ್ಸ್ ನಲ್ಲಿ ಏನಿದೆ ಎಂದು ತೆರೆದು ನೋಡಿದಾಗ, ಮೃತಪಟ್ಟ ನವಜಾತ ಶಿಶು ಒಂದು ಪತ್ತೆಯಾಗಿದೆ.
ಈ ವೇಳೆ ನವಜಾತ ಶಿಶುವನ್ನು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಅಲ್ಲದೆ ಶಿಶುವನ್ನು ಎಸೆದು ಹೋದವರಿಗೆ ಹಿಡಿ ಶಾಪ ಹಾಕಿದ್ದಾರೆ. ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೃತ್ಯ ಎಸಗಿದವರ ವಿರುದ್ದ ದೂರು ನೀಡಲು ಮುಂದಾದ ಅಧಿಕಾರಿಗಳು, ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Aadhaar Card: ಗಮನಿಸಿ.. ಉಚಿತವಾಗಿ ಆಧಾರ್ ಅಪ್ ಡೇಟ್ ಈ ದಿನಾಂಕದೊಳಗೆ ಮಾಡಿಸಿ: ಇಲ್ಲಾಂದ್ರೆ ಶುಲ್ಕ ಗ್ಯಾರೆಂಟಿ!
ಇನ್ನೂ ಅನೈತಿಕ ಸಂಬಂಧ ಹಿನ್ನೆಲೆ ಅಬಾರ್ಷನ್ ಮಾಡಿಸಿರುವ ಶಂಕೆಯಾಗಿದ್ದು, ಬ್ರೂಣ ಹತ್ಯೆಯ ಜಾಲ ಜಿಲ್ಲೆಯಲ್ಲಿ ಆಳವಾಗಿ ಬೇರುತ್ತಿದೆ. ಭ್ರೂಣ ಹತ್ಯೆಯ ಕೃತ್ಯ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದಿಯಾ ಎಂಬ ಅನುಮಾನ ಕಾಡುತೊಡಗಿದೆ.