ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಬಿಸಿ ಇದೀಗ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ನಗರದ ಹೋಟೆಲ್ಗಳ ವಹಿವಾಟಿನಲ್ಲಿ ಶೇ 30 ರಷ್ಟು ಕುಸಿತವಾಗಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಮಾಹಿತಿ ನೀಡಿದ್ದಾರೆ.
Breaking News: ಕೌಟುಂಬಿಕ ಕಲಹ: ಹೆಂಡತಿಯನ್ನೇ ಕೊಂದ ಗಂಡ..!
ಬಿಸಿಲು ಹೆಚ್ಚಾಗುತ್ತಿದ್ದಂತೆ ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿರುವ ಜನ ಹೋಟೆಲ್ಗೆ ಹೋಗುವುದನ್ನೂ ಕಡಿಮೆ ಮಾಡಿದ್ದಾರೆ. ಈ ಕಾರಣದಿಂದಾಗಿ ಹೋಟೆಲ್ ವ್ಯಾಪಾರ ವಹಿವಾಟು ಶೇ 30 ರಷ್ಟು ಕುಸಿತವಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮಧ್ಯಹ್ನದ ವೇಳೆ ಹೋಟೆಲ್ಗಳಿಗೆ ಜನರು ಬರುವುದೇ ಕಷ್ಟವಾಗಿ ಹೋಗಿದೆ. ಟೀ ಕಾಫಿ ಕುಡಿಯುವುದಕ್ಕಾದರೂ ಅನೇಕರು ಹೋಟೆಲ್ಗೆ ಹೋಗುತ್ತಿದ್ದರು. ಈಗ ಬಿಸಿಲು ಜಾಸ್ತಿ ಇರುವ ಪರಿಣಾಮ ಟೀ ಕಾಫಿ ಕುಡಿಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಹೋಟೆಲ್ ಉದ್ಯಮ ಕಷ್ಟವಿದೆ ಎಂದು ಅನೇಕ ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಈ ಬಿಸಿಲಿಗೆ ಹೋಟೆಲ್ಗೆ ಬರುವುದೇ ಕಷ್ಟ. ಈ ಬಿಸಿಯಲ್ಲಿ ಊಟ ತಿಂಡಿ ಮಾಡುವುದೇ ಕಷ್ಟವಾಗುತ್ತಿದೆ. ಹೀಗಾಗಿ ನಾವು ಹೋಟೆಲ್ಗಳಿಗೆ ಬರುವುದನ್ನೇ ಕಡಿಮೆ ಮಾಡಿದ್ದೇವೆ. ಟೀ ಕಾಫಿ ಬದಲು ಜ್ಯೂಸ್ ಎಳನೀರು ಕುಡಿಯುತ್ತಿದ್ದೇವೆ ಎಂದು ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ