ಬೆಂಗಳೂರು:- ಪ್ರಜ್ವಲ್ ಖಾಸಗಿ ವಿಡಿಯೋ ಪ್ರಕರಣದ ಹಿಂದೆ ನಾಲ್ವರು ಸಚಿವರ ಕಮಿಟಿಯನ್ನು ಡಿ.ಕೆ ಶಿವಕುಮಾರ್ ಮಾಡಿದ್ದಾರೆ ಎಂಬ ವಕೀಲ ದೇವರಾಜೇಗೌಡ ಆರೋಪಕ್ಕೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್…ಪೆನ್ಡ್ರೈವ್ ಗ್ಯಾಂಗ್ ಎಂದು ಸಚಿವರ ಹೆಸರು ಬಿಚ್ಚಿಟ್ಟ ಜೆಡಿಎಸ್!
ಈ ಸಂಬಂಧ ಮಾತನಾಡಿದ ಅವರು,ದೇವರಾಜೇಗೌಡ ಅವರ ಆರೋಪಗಳೆಲ್ಲ ಸುಳ್ಳು. ಯಾರಾದರೂ ಜಾಸ್ತಿ ಮಾತಾಡಿದ್ರೆ ಅವರ ಮೇಲೆ ಗೂಬೆ ಕೂರಿಸೋದು ಬಿಜೆಪಿಯ ಹಳೆ ಚಾಳಿ. ಈ ಹಿಂದೆ ಬಿಟ್ ಕಾಯಿನ್ನಲ್ಲಿ, ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಹಗರಣದಲ್ಲಿ ಪ್ರಿಕಾಂಕ್ ಖರ್ಗೆ ಪಾಲಿದೆ ಎಂದು ಬಿಜೆಪಿಯವರು ಹೇಳಿದ್ದರು. ಇದನ್ನೂ ಹಂಗೇ ಹೇಳಿರೋದು. ಯಾರಿಗೆ ಗೊತ್ತು ಮೇಲಿಂದಲೇ ಹೇಳಿಸಿರಬಹುದು ಎಂದು ವಾಗ್ದಾಳಿ ನಡೆಸಿದರು.
ದೇವರಾಜೇಗೌಡ ಅವರೇ ಅಮಿತ್ ಶಾ (Amitshah) ಅವರ ನಿರ್ದೇಶನದ ಮೇರೆಗೆ ನಾನು ಇದನ್ನೆಲ್ಲಾ ಮಾಡಿರುವುದು ಅಂತಾ ಈಗಾಗಲೇ ಹೇಳಿದ್ದಾರೆ. ಇದನ್ನೂ ಅವರೇ ಹೇಳಿಸಿರಬಹುದು. ಆದರೆ ಇದನ್ನು ಕೋರ್ಟ್ ಆವರಣದಲ್ಲಿ ಹೇಳುವ ಅವಶ್ಯಕತೆ ಏನಿದೆ?. ಲಾಯರ್ ಆಗಿರುವ ನೀವು ಬಂದು ಎಲ್ಲಾ ದಾಖಲೆಗಳನ್ನು ನೀಡಿ. ನಿಮಗೆ ಸಂಪೂರ್ಣವಾಗಿ ಕಾನೂನಿನ ಅರಿವಿದೆ. ಸಚಿವರಾಗಿರುವ ನಮಗೆ ಬೇರೆ ಕೆಲಸ ಇಲ್ವಾ?. ರಾಜ್ಯದಲ್ಲಿ ಭೀಕರ ಬರಗಾಲವಿದೆ ಎಂದರು.
ನೂರು ಕೋಟಿ ಆಫರ್ ಕೊಟ್ಟು 5 ಕೋಟಿ ಕ್ಯಾಶ್ ಕೊಡಲು ಡಿಕೆಶಿ ಬಂದಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಇದನ್ನು ಅಮಿತ್ ಶಾ ಅವರಿಗೆ ಹೇಳಬೇಕಿತ್ತು. ನೋಡಿ ಸರ್ 100 ಕೋಟಿ ಕೊಡುತ್ತಾರೆ. ಐಟಿ-ಇಡಿ ದಾಳಿ ಮಾಡಿಸಿ ಅಂತಾ ಹೇಳಬೇಕಿತ್ತು ಎಂದರು
![](https://ainlivenews.com/wp-content/uploads/2024/01/Ad-Banner-copy-scaled.jpg)