ಕೊಪ್ಪಳ: ಪುಲ್ವಾಮಾ ದಾಳಿ ಆದಾಗ ಕಾರಣರಾದವರನ್ನು ಹಿಡಿದು ಶಿಕ್ಷಿಸುವುದಾಗಿ ಹೇಳಿ ಐದು ವರ್ಷ ಆಯ್ತು. ಏನಾಗಿದೆ ಎಂದು ದೇಶದ ಜನರಿಗೆ ಉತ್ತರ ಕೊಡಬೇಕಲ್ಲವೆ ? ಯಾರು ದಾಳಿ ಮಾಡಿದರು? ಯಾರಿಗೆ ಶಿಕ್ಷೆ ಆಗಿದೆ? ಇದಕ್ಕೆ ಅಮಿತ್ ಶಾ ಉತ್ತರಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ.
168 ಲಕ್ಷ ಕೋಟಿ ರೂ. ಸಾಲ ಆಗಿದೆ. ಶೇ.83ರಷ್ಟು ನಿರುದ್ಯೋಗ ಇದೆ. ಈ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ನೋವಾಗುತ್ತದೆ. ಯಾವೊಂದು ಅಭಿವೃದ್ಧಿ ಕೆಲಸ ಮಾಡದೆ ಮತ ಕೇಳಲು ರಾಜ್ಯಕ್ಕೆ ಬರಲು ನಾಚಿಕೆ ಆಗಲ್ವಾ? ಎಂದು ವ್ಯಂಗ್ಯವಾಡಿದರು. ಅಮಿತ್ ಷಾ ಅವರು ಬರ ಪರಿಹಾರ ನೀಡಲು ಮನವಿ ಸಲ್ಲಿಕೆ ತಡವಾಗಿದೆ ಎಂದು ಸುಳ್ಳು ಹೇಳಿದರು.
PUC ಮತ್ತು SSLC ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ಸಿಎಂ ಸವಾಲು ಹಾಕಿದ್ದಾರೆ. ಈ ಬಗ್ಗೆ ಬಿಜೆಪಿಯವರು ಮಾತನಾಡಲಿ. ಅವರಿಗೆ ಧರ್ಮ, ಜಾತಿ, ಮಂದಿರ ಬಗ್ಗೆ ಮಾತನಾಡುತ್ತಾರೆ. ಕೊನೆಗೆ ಅಂಜನಾದ್ರಿ ಬೆಟ್ಟಕ್ಕೆ ಬರುತ್ತಾರೆ. ಮೋದಿ ನೋಡಿ ಮತ ಹಾಕಿ ಎನ್ನುತ್ತಾರೆ. ಅವರು ಏನು ಮಾಡಿದ್ದಾರೆ. ಹತ್ತು ವರ್ಷದಲ್ಲಿ ಅವರು ಮಾಡಿದ ಸಾಧನೆ ಪಟ್ಟಿ ಹಿಡಿದು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.