ಮಂಡ್ಯ :- 50 ಸಾವಿರ ರೂಪಾಯಿ ಬಿಲ್ ಗೆ ಮನೆ ಮುಂದೆ ಕಾಯ್ತಿದ್ದ ಒಬ್ಬ ಗುತ್ತಿಗೆದಾರನೊಬ್ಬ ಇಂದು ದೇವೇಗೌಡರ ಕೊಡುಗೆ ಏನು ಅಂತ ಕೇಳ್ತಿದ್ದಾನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿರುಗೇಟು ನೀಡಿದ್ದಾರೆ.
ಉಂಡ ಮನೆಗೆ ಕನ್ನ ಹಾಕಿದ ಕೆಲಸದವ: ಒಂದೇ ಸರಿ ಲಕ್ಷಾಧಿಪತಿಯಾಗಲು ಖತರ್ನಾಕ್ ಪ್ಲ್ಯಾನ್!
ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ದೇವೆಗೌಡರ ಕೊಡುಗೆ ಏನೆಂದು ಅಂತ ಕೇಳುವ ಚೆಲುವರಾಯಸ್ವಾಮಿ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ 50 ಸಾವಿರ ರೂಪಾಯಿಯ ಗುತ್ತಿಗೆ ಕಾಮಗಾರಿಗೆ ಬಿಲ್ ಪಾವತಿಗಾಗಿ ಮನೆ ಮುಂದೆ ಕಾಯ್ತಿದ್ದ ಗುತ್ತಿಗೆದಾರ ಇಂದು ದೇವೇಗೌಡರ ಕೊಡುಗೆ ಏನು ಅಂತ ಕೇಳ್ತಿದ್ದಾರೆ. ಅವರ ಕೊಡುಗೆಗಳನ್ನು ಹೇಳುತ್ತಾ ಹೋದರೆ ದಿನಗಳೇ ಸಾಲೋದಿಲ್ಲ.
ಶಿಂಷಾ ನದಿ ಕಾವೇರಿ ಜೊತೆ ಸೇರಿ ತಮಿಳುನಾಡಿಗೆ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ಇಗ್ಗಲೂರು ಬಳಿ ಬ್ಯಾರೇಜ್ ನಿರ್ಮಾಣ ಮಾಡಿದ ಪರಿಣಾಮ ಇಂದು ಮದ್ದೂರು, ಮಳವಳ್ಳಿ ಹಾಗೂ ಚನ್ನಪಟ್ಟಣದ ಸಾವಿರಾರು ರೈತರಿಗೆ ಇಂದು ಅನುಕೂಲ ಕಲ್ಪಿಸಿದ ಪುಣ್ಯಾತ್ಮ ಅವರು. ಮಂಡ್ಯ ಜಿಲ್ಲೆಯ ರೈತರಿಗಾಗಿ ಕೆಲಸ ಮಾಡಿರೋದು ದೇವೇಗೌಡರು. ಅವರು ಕೆಲಸ ಮಾಡುವಾಗ ಚೆಲುವರಾಯಸ್ವಾಮಿ ಚುನಾವಣೆಗೆ ನಿಂತಿರಲಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದ ಚಿಲ್ಲರೆ ಭಾಗ್ಯಗಳಿಂದ ಜನರನ್ನು ಉದ್ಧಾರ ಮಾಡೋಕೆ ಆಗಲ್ಲ. ರೈತ ಪರ ಕೆಲಸಗಳನ್ನು ಮಾಡಿದಾಗ ಮಾತ್ರ ಉದ್ಧಾರ ಆಗಲು ಸಾಧ್ಯ. ಐದು ವರ್ಷಗಳ ಹಿಂದೆ ವಿಸಿ ನಾಲೆ ಅಭಿವೃದ್ಧಿಗೆ ಕಾರ್ಯಕ್ರಮ ಘೋಷಣೆ ಆಗಿತ್ತು. ಈಗ ಅದನ್ನು ಉನ್ನತೀಕರಣಗೊಳಿಸುವ ಕೆಲಸ ಮಾಡ್ತಿದ್ದಾರೆ.
91 ಅಡಿ ನೀರಿದ್ರು ಜನರಿಗೆ ನೀರು ಕೊಡ್ತಾ ಇಲ್ಲ. ಸ್ಟಾರ್ ಚಂದ್ರು ಗುತ್ತಿಗೆಗಾಗಿ ನೀರು ನಿಲ್ಲಿಸಿದ್ದಾರೆ. ನಾಲೆಯ ಗುತ್ತಿಗೆ ದುಡ್ಡಲ್ಲಿ ಚುನಾವಣೆ ಮಾಡಲು ಸ್ಟಾರ್ ಚಂದ್ರು ಬಂದಿರೋದು. ಅಕ್ಕ-ತಂಗಿಯರೇ ಅವರು ಕೊಡುವ ಚಿಲ್ಲರೆ ಕಾಸಿಗೆ ಮಾರು ಹೋಗಬೇಡಿ. ಅಭಿವೃದ್ಧಿಯ ಕೆಲಸಗಳನ್ನು ನೋಡಿ. ನಾವು ಮಾಡಿರುವ ಅಭಿವೃದ್ಧಿಯನ್ನು
ಈಗ ಮಾಡುತ್ತಿರೋ ಕೆಲಸಗಳನ್ನು ನೋಡಿ. ಹಣ ಚೆಲ್ಲಿದವನಿಗೆ ಮತ ಕೊಟ್ಟರೇ ಜಿಲ್ಲೆ, ರಾಜ್ಯ, ದೇಶ ಉದ್ಧಾರ ಆಗಲ್ಲ. ಕುಮಾರಸ್ವಾಮಿ ಅವರನ್ನು ಮಂಡ್ಯದ ಚುನಾವಣೆಗೆ ಕರೆದಂತಿದ್ದು ನಾವು. ಕುಮಾರಸ್ವಾಮಿ ಗೆದ್ದರೆ ಕೇಂದ್ರ ಮಂತ್ರಿ ಆಗುತ್ತಾರೆ.
ಬೇರೆ ಯಾವನೋ ಗೆದ್ದರೆ ಸಾಮಾನ್ಯ ಸಂಸದರ ರೀತಿ ಇರ್ತಾನೆ. ಕುಮಾರಸ್ವಾಮಿ ಗೆದ್ದರೆ ಅದರ ಸ್ಟೇಟಸ್ ಬೇರೆ ಇರುತ್ತೆ. ಎರಡು ಸಾವಿರಕ್ಕೆ ಮಾರುಹೋಗಿ ನಿಮ್ಮ ಮಾನ ಮರ್ಯಾದೆ ಕಳೆದುಕೊಳ್ಳಬೇಡಿ.
ಹಣಕ್ಕೆ ಬೆಲೆ ಕೊಡಬೇಡಿ, ಗುಣಕ್ಕೆ ಬೆಲೆ ಕೊಡಿ. ಹೀಗಾಗಿ ಕುಮಾರಸ್ವಾಮಿ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ವರದಿ : ಗಿರೀಶ್ ರಾಜ್ ಮಂಡ್ಯ