ಹುಬ್ಬಳ್ಳಿ: ಬಸವ ಜಯಂತಿ ಅಂಗವಾಗಿ ಮಲ್ಲಿಕಾರ್ಜುನ ಗಚ್ಚಿ ನ ಬಸವೇಶ್ವರ ದೇವಸ್ಥಾನ ದ ವತಿಯಿಂದ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲಾಯಿತು. ಟ್ರಸ್ಟಿಗಳಾದ ಎಚ್ಎಸ್ ರೂಗಿ ಮಾತನಾಡಿ, ಶ್ರೀ ಬಸವೇಶ್ವರರು ಶೈವ ಧರ್ಮದ ಭಕ್ತಿ ಚಳವಳಿಯಲ್ಲಿ ಪ್ರಸಿದ್ಧ ಸಂತರಾಗಿ ಗುರುತಿಸಿಕೊಂಡಿದ್ದವರು.
ಸಿಲಿಕಾನ್ ಸಿಟಿಯ ಹಲವೆಡೆ ಮಳೆ ಆರಂಭ.. ವಾಹನ ಸವಾರರು ಪರದಾಟ!
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮೇಲು ಕೀಳು, ಜಾತಿ ಧರ್ಮ ಹೀಗೆ ನೊಂದವರ ಪರವಾಗಿ ನಿಂತ ಮಹಾನುಭಾವ. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಬಸವಣ್ಣನವರು ಕ್ರಾಂತಿಯ ಬೀಜವನ್ನು ಬಿತ್ತಿದ ಹರಿಕಾರ.
‘ಕಾಯಕವೇ ಕೈಲಾಸ’, ‘ವಸುದೈವ ಕುಟುಂಬಕಂ’ ಹೀಗೆ ಹಲವಾರು ತತ್ವಗಳನ್ನು ಸಾರಿದ ಮಹಾನ್ ಭಾವನನ್ನು ಇಂದು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಸವ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಸಮಾಜಕ್ಕೆ ಸಂದೇಶವನ್ನು ಸಾರಿದ ಬಸವೇಶ್ವರರ ತತ್ವಾದರ್ಶ ದಾರಿ ದೀಪವಾಗಿದ್ದರು.
ಜನರಿಗೆ ಅನ್ನಸಂಪರ್ಪಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ನಮ್ಮ ಟ್ರಸ್ಟ್ ಕಮಿಟಿ ಛೇರ್ಮನರಾದ ಜಿಎಂ ಚಿಕ್ಕಮಠ್ ಹಾಗೂ ಪಿಎಸ್ ಬಳ್ಳೊಳ್ಳಿ, ಜಿಪಿ ಉಗುರುಗೋಡು, ಎಂ ಎಸ್ ರೂಗಿ, ಅರುಣ್ ಉಗುರುಗೋಳ, ಶ್ರೀಶೈಲ್ ಸೌದತ್ತಿ ಇನ್ನು ಅನೇಕ ಭಕ್ತರು ಕೂಡಿದ್ದರು