ವಿಜಯಪುರ:- ತುಂಬು ವೇದಿಕೆಯಲ್ಲಿ ರಾಹುಲ್ ಗಾಂಧಿಯಿಂದ ಸಿದ್ದುಗೆ ಅವಮಾನ ಆಗಿದ್ದು, ಸಿಎಂ ವೇದಿಕೆಗೆ ಬರ್ತಿದ್ದಂತೆ ರಾಗಾ ವೇದಿಕೆಯಿಂದ ಇಳಿದು ಹೋಗಿದ್ದಾರೆ.
ಕರ್ನಾಟಕದಲ್ಲಿ ಮೊದಲ ಹಂತದ ವೋಟಿಂಗ್ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ.. ಇಲ್ಲಿದೆ ಡೀಟೈಲ್ಸ್!
ಮೊದಲು ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಿ, ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಸಿದ್ದರಾಮಯ್ಯ ಆಗಮಿಸಿದ್ರು, ಈ ವೇಳೆ ರಾಹುಲ್ ಗಾಂಧಿ ವೇದಿಕೆಯಿಂದ ಇಳಿದು ಕೆಳಕ್ಕೆ ನಡೆದ ಪ್ರಸಂಗ ನಡೆಯಿತು. ಇದರಿಂದ ಕಾಂಗ್ರೆಸ್ ನಾಯಕರೇ ಮುಜುಗರ ಎದುರಿಸುವಂತಾಯ್ತು.
ವಿಜಯಪುರ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಹಾಗೂ ವಿಜಯಪುರ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಸಮಾವೇಶದ ವೇದಿಕೆಗೆ ಆಗಮಿಸಿದ ರಾಹುಲ್ ಗಾಂಧಿಗೆ ಒಣದ್ರಾಕ್ಷಿ ಹಾರ ಹಾಕಿ, ಎಂಬಿ ಪಾಟೀಲ್ ಸ್ವಾಗತಿಸಿದ್ರು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ವೇದಿಕೆಯಲ್ಲಿ ಮುಜುಗರದ ಸನ್ನಿವೇಶ ಎದುರಾಯ್ತು. ಸಿಎಂ ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಿದಂತೆಯೇ ರಾಹುಲ್ ಗಾಂಧಿ ವೇದಿಕೆಯಿಂದ ಕೆಳಗಿಳಿದು ನಡೆದ್ರು!
ವೇದಿಕೆ ಎಡಭಾಗದಿಂದ ಸಿಎಂ ಸಿದ್ದರಾಮಯ್ಯ ಆಗಮಿಸಿದ್ರು. ಇದೇ ವೇಸೆ ವೇದಿಕೆ ಬಲಗಡೆಯಿಂದ ರಾಹುಲ್ ಗಾಂಧಿ ಇಳಿದು ಹೋದ್ರುು.ರಾಹುಲ್ ಗಾಂಧಿ ವೇದಿಕೆಯಿಂದ ಇಳಿಯುತ್ತಿದ್ದ ವೇಳೆ ಸಿದ್ದರಾಮಯ್ಯ ಬರ್ತಿದ್ದಾರೆ ಅಂತ ಸಚಿವ ಶಿವಾನಂದ ಪಾಟೀಲ್ ಹಾಗೂ ಸಿಬ್ಬಂದಿ ರಾಹುಲ್ ಗಾಂಧಿಯವ್ರಿಗೆ ಹೇಳಿದ್ರು. ಆದರೂ ಅದನ್ನ ಗಮನಿಸದೇ ವೇದಿಕೆಯಿಂದ ರಾಹುಲ್ ಗಾಂಧಿ ಇಳಿದು ಹೋದ್ರು.
ಬಳಿಕ ರಾಹುಲ್ ಹಿಂದೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಓಡೋಡಿ ಹೋಗಿ ಮಾತನಾಡಿಸಿದ್ರು. ಸಿಎಂ ಹಾಗೂ ಮುಖಂಡರು ವೇದಿಕೆಯಿಂದ ಇಳಿದ ಹೋದ ಕಾರಣ ವೇದಿಕೆ ಖಾಲಿ ಖಾಲಿ ಆಯ್ತು. ಬಳಿಕ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ವೇದಿಕೆಗೆ ವಾಪಸ್ ಕರೆತಂದರು.