ಹುಬ್ಬಳ್ಳಿ: ಗಣೇಶೋತ್ಸವ ಆಚರಣೆ ಎಂದರೆ ಕಿವಿಗಚ್ಚುವ ಡಿಜೆ ಸೌಂಡ್, ಡಾನ್ಸ್ , ಹಾಡು ಮೋಜು ಮಸ್ತಿಗೆ ಹೆಚ್ಚು ಪ್ರಾಶಸ್ತ್ಯ ಸಿಗುವ ಇಂದು ಇಲ್ಲೊಂದು ಗಜಾನನ ಉತ್ಸವ ಮಂಡಳಿ ಸಾವಿರಾರು ಜನರಿಂದ ರಕ್ತದಾನ ಮಾಡುವ ಮೂಲಕ ವಿನೂತನ ಹಾಗೂ ಅರ್ಥಪೂರ್ಣವಾಗಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ನಗರದ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ವತಿಯಿಂದ ರಕ್ತದಾನ ಮೂಲಕ ಗಣೇಶೋತ್ಸವ ಆಚರಣೆ ಮಾಡುತಿದ್ದು,ಮೋಜು, ಮಸ್ತಿ ಬದಲು ಸಮಾಜಮುಖಿ ಕಾರ್ಯಕ್ರಮ ಈಗ ಗಮನ ಸೆಳೆಯುತ್ತಿದೆ.ಪ್ರತಿ ವರ್ಷ ಒಂದಲ್ಲಾ ಒಂದು ವಿನೂತನ ರೀತಿ ಗಣೇಶೋತ್ಸವ ಮಾಡುತಿದ್ದು
ಈ ವರ್ಷ ರಕ್ತದಾನ ಮೂಲಕ ಗಜಾನನ ಆರಾಧನೆ ಮಾಡಲಾಗುತಿದ್ದುರಕ್ತದಾನ ಮಹಾದಾನ ಗಣಪ ದರ್ಶನಕ್ಕೆ ಬಂದವರು, ಸ್ಥಳೀಯರಿಂದ ರಕ್ತದಾನ ಮಾಡುತಿದ್ದಾರೆ. ಇಂದು ಎಲ್ಲಿಲ್ಲದ ರಕ್ತದ ಕೊರತೆ ಇಂದು ಹೆಚ್ಚಾಗುತಿದ್ದು ರಕ್ತದಾನ ಮೂಲಕ ಮಹಾ ಕಾರ್ಯಕ್ಕೆಮುಂದಾದ ಸಪ್ತಗಿರಿ ಯುವಕ ಮಂಡಳಿ ರಕ್ತದಾನ ಕುರಿತು ಸಹ ಜಾಗೃತಿ ಮೂಡಿಸಲಾಗುತ್ತಿದೆ.
ಈಗಾಗಲೇ ಸಾವಿರಾರು ಜನರಿಂದ ರಕ್ತದಾನ ಮಾಡಿದ್ದುರಾಷ್ಟ್ರೋತ್ಥಾನ ರಕ್ತ ಭಂಡಾರದ ಸಹಯೋಗದಿಂದ ರಕ್ತದಾನ ನಡೆಸಲಾಗುತ್ತಿದೆ.
ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ಅಧ್ಯಕ್ಷ ಮುತ್ತು ಪಾಟೀಲ್ ಮಾಹಿತಿ ನೀಡಿದ್ದು ನಮ್ಮ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ವತಿಯಿಂದ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಜನಸಾಮಾನ್ಯರಿಗೆ ಅನುಕೂಲಕ ಆಗಲಿ ಎಂದು ರಕ್ತದಾನ
ಪ್ರತಿ ವರ್ಷ ವಿಭಿನ್ನ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕೆ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ಪದಾಧಿಕಾರಿಗಳ ಸಹಕಾರ ಕೊಡುತಿದ್ದು ಇದು ಸಂತಸದ ವಿಷಯ. ಕಳೆದ ವರ್ಷವೇ ರಕ್ತದಾನ ಆಯೋಜನೆ ಮಾಡಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಆಗಲಿಲ್ಲ ಈ ವರ್ಷ ಆಯೋಜನೆ ಮಾಡಲಾಗಿದೆ
ಇದರಿಂದಾಗಿ ಸಾಕಷ್ಟು ಜನರಿಗೆ ಅನುಕೂಲ ಆಗಿದೆ.ಅನೇಕ ವಿಭಿನ್ನ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದುಯುವಕರಿಗೆ, ಮಹಿಳೆಯರಿಗೆ ಹಾಗೂ ದಂಪತಿಗಳಿಗೆ ಸಹ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು .ಇನ್ನು ಸ್ಥಳೀಯ ಮುಖಂಡೆ ರಶ್ಮಿ ಈ ವೇಳೆ ಮಾತನಾಡಿದ್ದು,
ಹೆಣ್ಣು ಮಕ್ಕಳು ರಕ್ತದಾನ ಮಾಡಲು ಆಗಲ್ಲ ಅನ್ನುವ ಮಾತಿದೆಆದರೆ ಏನು ಆಗಲ್ಲ ಹಿಮೋಗ್ಲೋಬಿನ್ ೧೨ ರಷ್ಟು ಇತ್ತು ಅಂದರೆ ಮಾಡಬಹುದು. ನಾವು ಹೆಣ್ಣು ಮಕ್ಕಳು ಯಾವುದೇ ಭಯ ಇಲ್ಲದೇ ರಕ್ತದಾನ ಮಾಡಿದ್ದೇವೆ ಇದೇ ರೀತಿ ಮುಂದೇನೋ ಮಾಡುತ್ತೇವೆನಮ್ಮನ್ನ ನೋಡಿ ಇನ್ನೊಬ್ಬರು ರಕ್ತದಾನ ಮಾಡಿಯಾವುದೇ ಭಯ ಪಡಬೇಡಿ ಎಂದು ಮನವಿ ಮಾಡಿದರು.
ಇನ್ನು ನಿವೃತ್ತ ಸೈನಿಕ ಪ್ರಕಾಶ ಗಣಾಚಾರಿ ಪ್ರತಿಕ್ರಿಯೆ ಕೊಟ್ಟಿದ್ದುರಕ್ತದಾನ ಅಂದರೆ ಮಹಾದಾನ ಎಲ್ಲರೂ ಮಾಡಬೇಕು. ರಕ್ತದಾನ ಪುಣ್ಯದ ಕೆಲಸ ತುರ್ತು ಪರಿಸ್ಥಿತಿ ಯಾವಾಗ ಬರುತ್ತದೆ ಎಂದು ಹೇಳಲು ಆಗಲ್ಲನಾವು ರಕ್ತದಾನ ಮಾಡಿದರೆ ನಮ್ಮನ್ನ ನೋಡಿ ಪ್ರಭಾವ ಹೊಂದಿ ರಕ್ತದಾನ ಮಾಡುವರು18 ವರ್ಷದಿಂದ ಹಿಡಿದು 60 ವರ್ಷದೊಳಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು. ಇದರ ಜೊತೆಗೆ ಎಲ್ಲ ಗಜಾನನ ಮಂಡಳದವರು ರಕ್ತದಾನದ ವ್ಯವಸ್ಥೆ ಮಾಡಲು ಮನವಿ ಮಾಡಿದರು .