ಶಿವಮೊಗ್ಗ:- ಚಿತ್ರನಟರನ್ನು ನೋಡಿ ಜನ ಮತ ಹಾಕಲ್ಲ, ಅವರನ್ನು ನೋಡಲು ಬರುತ್ತಾರಷ್ಟೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಯಾವುದೇ ನಕಲಿ ಮತದಾನ ನಡೆದಿಲ್ಲ – ಡಿ.ಸಿ ಡಾ.ವಿದ್ಯಾಕುಮಾರಿ!
ಮಧು ಬಂಗಾರಪ್ಪ ಒಳ್ಳೆ ಕನ್ನಡಕ ತಗೆದುಕೊಳ್ಳಲಿ, ನಮ್ಮ ನಾಮಪತ್ರ ಸಲ್ಲಿಕೆ ದಿನ ಎಷ್ಟು ಜನ ಸೇರಿದ್ದರು ಅಂತ ಗೊತ್ತಾಗುತ್ತೆ ಅಂತ ವ್ಯಂಗ್ಯವಾಡಿದ್ರು. ಇನ್ನು ಚಿತ್ರ ನಟರನ್ನು ನೋಡೋಕೆ ಜನ ಬರ್ತಾರೆ ಅಷ್ಟೇ, ಆದ್ರೆ ಚಿತ್ರ ನಟರನ್ನು ನೋಡಿ ಮತ ಹಾಕಲ್ಲ ಅಂತ ಈಶ್ವರಪ್ಪ ಟಾಂಗ್ ಕೊಟ್ರು.
ಹೀಗಂತ ಕೆಎಸ್ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಸಿನಿಮಾ ನಟರನ್ನ ನೋಡಿ ವೋಟ್ ಕೊಡ್ತಾರೆ ಅನ್ನುವ ಭ್ರಮೆಯಲ್ಲಿ ಮಧು ಬಂಗಾರಪ್ಪ ಇದ್ದಾರೆ. ಚಿತ್ರ ನಟರನ್ನು ನೋಡೋಕೆ ಜನ ಬರ್ತಾರೆ. ಆದರೆ ಚಿತ್ರ ನಟರನ್ನು ನೋಡಿ ಮತ ಹಾಕಲ್ಲ ಅಂತ ವ್ಯಂಗ್ಯವಾಡಿದ್ದಾರೆ. ಇನ್ನು ಯಡಿಯೂರಪ್ಪನವರೇ ರಾಘವೇಂದ್ರ ಗೆಲ್ಲಿಸಲು ಗೀತಾ ಶಿವರಾಜ್ಕುಮಾರ್ ಅವರನ್ನು ಹಾಕಿಸಿಕೊಂಡು ಬಂದಿದ್ದಾರೆ ಅಂತ ಈಶ್ವರಪ್ಪ ಆರೋಪಿಸಿದ್ರು.
ಸಿದ್ದರಾಮಯ್ಯನವರ ಮೊನ್ನೆಯ ಹೇಳಿಕೆ ತುಂಬ ನೋವು ಕೊಟ್ಟಿದೆ. ಮುಸ್ಲಿಂಮರಿಗೆ ಸೌಲಭ್ಯ ಕೊಡಲು ಹಿಂದೆ ಜರಿಯಲ್ಲ ಎಂದಿದ್ದಾರೆ. ನೇಹಾ ಹಿರೇಮಠ್ ಹತ್ಯೆಯಾದಾಗ ತುಂಬಾ ಹಗುರವಾದ ಹೇಳಿಕೆಯನ್ನು ಸಿಎಂ ಕೊಟ್ಟರು. ಪ್ರತಿಭಟನೆ ನಡೆದ ನಂತರ ಸಿಎಂ ಸಿಐಡಿ ತನಿಖೆಗೆ ಕೊಟ್ಟರು. ಸಿಐಡಿ ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತೆ. ಸಿಎಂ ಹೇಳಿದ ಮೇಲೆ ಸಿಐಡಿ ವರದಿ ಏನು ಅಂತ ಕೊಡುತ್ತೆ? ಸಿಐಡಿ ಕೈಯಲ್ಲಿ ಇದಾಗಲ್ಲ, ಸಿಬಿಐಗೆ ಈ ಪ್ರಕರಣ ಕೊಡಬೇಕು ಅಂತ ಈಶ್ವರಪ್ಪ ಆಗ್ರಹಿಸಿದ್ರು