ಬೆಂಗಳೂರು: ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಗಾದೆ ಮಾತನ್ನ ನೀವೆಲ್ರೂ ಕೇಳಿರುತ್ತೀರ. ಅದೇ ರೀತಿ ಇಲ್ಲಿ ಜೊತೆ ಜೊತೆಯಾಗಿ ಆಟವಾಡುತ್ತಾ ಬೆಳೆದ ಅಣ್ಣ ಅನ್ಲೈನ್ ಗೇಮ್ ಚಟಕ್ಕೆ ಒಡಹುಟ್ಟಿದ ತಮ್ಮನನ್ನೆ ಬರ್ಬರವಾಗಿ ಕೊಂದು ಮುಗಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಇಂತಹದೊಂದು ಘೋರ ಘಟನೆ ನಡೆದಿದ್ದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ..
ಜೈಲಿಂದ ಹೊರ ಬಂದ ದಿನವೇ ಸರ್ಕಾರ ಪತನ… ದೇವರಾಜೇಗೌಡ ಅಲ್ಲೇ ಇರಲಿ ಎಂದ ಗೃಹ ಸಚಿವ!
ಯೆಸ್ ಹೀಗೆ ಫೋಟೊದಲ್ಲಿ ಕಾಣುತ್ತಿರುವ ಈತನ ಹೆಸರು ಪ್ರಾಣೇಶ್ ಅಂತ ಕೇವಲ ಹದಿನೈದು ವರ್ಷದ ಈತ ತನ್ನ ಅಣ್ಣ ಶಿವಕುಮಾರ್ ನಿಂದಲೇ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ. ಆಂದ್ರಪ್ರದೇಶದ ಕರ್ನೂಲಿನ ಸೂಳೆಕೆರಿ ಗ್ರಾಮದ ನಿವಾಸಿಯಾದ ಈತ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನೆರಿಗಾ ಸಮೀಪದ ಕತ್ರಿಗುಪ್ಪೆ ಬಳಿ ಇದೇ ತಿಂಗಳು ಹದಿನೈದನೇ ತಾರೀಖು ಕೊಲೆಯಾಗಿದ್ದಾನೆ. ಅಜ್ಜಿ ಜೊತೆ ವಾಸವಿದ್ದ ಪ್ರಾಣೇಶ್ ಎರಡು ವಾರಗಳ ಹಿಂದೆ ತಮ್ಮ ತಂದೆ ತಾಯಿ ಮತ್ತು ಅಣ್ಣ ಗಾರೆ ಕೆಲಸ ಮಾಡುತ್ತಿದ್ದ ಕತ್ರಿಗುಪ್ಪೆಗೆ ರಜೆ ಕಳೆಯಲು ಬಂದಿದ್ದಾನೆ. ಆದ್ರೆ ಅಪ್ಪ ಅಮ್ಮ ಅಣ್ಣ ಗಾರೆ ಕೆಲಸಕ್ಕೆ ಹೋದರೆ ಬಾಲಕ ಪ್ರಾಣೇಶ್ ಅಣ್ಣನ ಮೊಬೈಲ್ ನಲ್ಲಿ ಆನ್ಲೈನ್ ಗೇಮ್ ಚಟಕ್ಕೆ ಬಿದ್ದಿದ್ದಾನೆ. ಇದೇ ವಿಚಾರಕ್ಕೆ ಅಣ್ಣ ಶಿವಕುಮಾರ್ ಮತ್ತು ತಂದೆಗೆ ಗಲಾಟೆ ಕೂಡ ನಡೆದಿದೆ. ತಮ್ಮ ತಪ್ಪು ಮಾಡಿದರೆ ನನ್ನ ನಿಂದಿಸುತ್ತಾರೆ ಎಂಬ ಆಕ್ರೋಶ ಅಣ್ಣ ಶಿವಕುಮಾರನಿಗೆ ಕಾಡಿದೆ.
ಇನ್ನೂ ಸದಾ ಮೊಬೈಲ್ ನಲ್ಲಿ ಆನ್ಲೈನ್ ಗೇಮ್ ಆಡುತ್ತಿದ್ದ ಪ್ರಾಣೇಶ್ ಅಣ್ಣನ ಅಕೌಂಟ್ ನಲ್ಲಿದ್ದ ಹಣವನ್ನು ಸೋತಿದ್ದಾನೆ. ಈ ನಡುವೆ ಇದೇ ತಿಂಗಳು 15ನೇ ತಾರೀಖು ಬಹಿರ್ದೆಸೆಗೆ ಹೋದ ಪ್ರಾಣೇಶ್ ಕಾಣೆಯಾಗಿದ್ದಾನೆ. ಸಂಜೆಯಾಗುತ್ತಿದ್ದಂತೆ ತಮ್ಮ ನೀಲಗಿರಿ ತೋಪಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ ಎಂದು ಅಣ್ಣ ಶಿವಕುಮಾರ್ ತಿಳಿಸಿದ್ದಾನೆ. ಮೃತದೇಹವಿದ್ದ ಸಿಕ್ಕ ಜಾಗದಲ್ಲಿ ಶಿವಕುಮಾರ ಹೈಡ್ರಾಮ ಮಾಡಿದ್ದು, ತಮ್ಮನಿಗೆ ಚಳಿಯಾಗುತ್ತದೆ, ಸೊಳ್ಳೆಗಳು ಕಡಿಯುತ್ತವೆ ಬೆಡ್ ಶೀಟ್ ಹಾಕಿ ಎಂದು ನಾಟಕ ಮಾಡಿದ್ದಾನೆ. ಸ್ಥಳಕ್ಕಾಗಮಿಸಿದ ಸರ್ಜಾಪುರ ಪೊಲೀಸರು, ಶ್ವಾನದಳ, ಸೀನ್ ಆಫ್ ಕ್ರೈಮ್ ಆಫೀಸರ್ಸ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿವಕುಮಾರ್ ಕೆಲಸ ಮಾಡುತ್ತಿದ್ದ ನಿರ್ಮಾಣ ಹಂತದ ಕಟ್ಟಡದ ಸಮೀಪದ ಮನೆಯಲ್ಲಿನ ಸಿಸಿಟಿವಿ ಕ್ಯಾಮಾರಾವನ್ನ ಪೋಲಿಸರು ಪರಿಶೀಲನೆ ನಡೆಸಿದಾಗ ಸುತ್ತಿಗೆಯನ್ನ ಜೇಬಿನಲ್ಲಿ ಇಟ್ಟುಕೊಂಡು ಶಿವಕುಮಾರ ತೋಪಿನ ಕಡೆ ಹೋಗುತ್ತಿರುವ ದೃಶ್ಯ ಕಂಡಿದೆ. ಕೂಡಲೇ ಅಲರ್ಟ್ ಆದ ಸರ್ಜಾಪುರ ಪೋಲಿಸ್ ಇನ್ಸ್ಪೆಕ್ಟರ್ ನವೀನ್ ನೇತೃತ್ವದ ತಂಡ ಶಿವಕುಮಾರ್ ವರ್ತನೆ ಬಗ್ಗೆ ಅನುಮಾನಗೊಂಡು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯಿಬಿಟ್ಟಿದ್ದಾನೆ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ಲೈನ್ ಗೇಮ್ ಎನ್ನುವ ದುಷ್ಚಟಕ್ಕೆ ಒಳಗಾಗಿ ಸಾಕಷ್ಟು ಜನರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳ ಜೊತೆಗೆ ಅನ್ಲೈನ್ ಗೇಮ್ ಆಡಲು ಮೊಬೈಲ್ ನೀಡಿಲ್ಲ ಎಂದು ಅಣ್ಣನೇ ತಮ್ಮನನ್ನ ಕೊಲೆಗೈದಿರೋದು ಮಾತ್ರ ದುರಂತವೇ ಸರಿ. ಇನ್ನಾದ್ರು ನಿಮ್ಮ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪೋಷಕರು ಎಚ್ಚರ ವಹಿಸಿ.