ಮೈಸೂರು: ರೋಟರಿ ಮೈಸೂರು, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ಗಳ ಸಂಯುಕ್ತಾಶ್ರಯದಲ್ಲಿ ಜನರಲ್ಲಿ ಸುರಕ್ಷಿತ ವಾಹನ ಚಾಲನೆ ಅರಿವು ಮೂಡಿಸಲು ಇದೇ ನ. ೧೮ ರಂದು ಜೀವರಕ್ಷಾ ರಸ್ತೆ ಸುರಕ್ಷತೆ ಬೈಕಥಾನ್ ಆಯೋಜಿಸಿರುವುದಾಗಿ ರೋಟರಿ ಅಧ್ಯಕ್ಷ ಅರುಣ್ ಬೆಳವಾಡಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅಂದು ಬೆಳಗೆ ಏಳಕ್ಕೆ ನಗರದ ಸಂತ ಜೋಸೆಫ್ ನರ್ಸಿಂಗ್ ಕಾಲೇಜು ಬಳಿ ರಸ್ತೆ ಸುರಕ್ಷತೆ ಕುರಿತ ಬೀದಿ ನಾಟಕ ಪ್ರದರ್ಶನವಿದೆ. ಬಳಿಕ ಅರಮನೆ ಮುಂಭಾಗದಿAದ ರ್ಯಾಲಿ ಆರಂಭವಾಗಿ ಚಿತ್ರದುರ್ಗದ ಮೂಲಕ ನ. ೧೯ ರಂದು ಹಂಪಿ ತಲುಪಲಿದೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ರಸ್ತೆ ಅಪಘಾತಗಳಲ್ಲಿನ ಶೇ. ೮೦ ರಷ್ಟು ಪ್ರಕರಣಗಳಲ್ಲಿ ತಲೆಗೆ ಪೆಟ್ಟು ಬಿದ್ದಿರುತ್ತದೆ. ಬೈಕ್ ಸವಾರರು ಹೆಲ್ಮೆಟ್ ಧರಿಸದಿರುವುದು ಇದಕ್ಕೆ ಕಾರಣ. ಹೀಗಾಗಿ ಈ ಕುರಿತು ಹಾಗೂ ಇನ್ನಿತರ ಸುರಕ್ಷಿತ ರಸ್ತೆ ಪ್ರಯಾಣ ಕುರಿತಂತೆ ಈ ಬೈಕಥಾನ್ ಆಯೋಜಿಸಲಾಗಿದೆ ಎಂದರು. ಡಾ. ರೇಖಾ, ಡಾ. ದೀಪು, ರಾಜಾರಾಂ, ಜಸ್ವಂತ್ ಹಾಜರಿದ್ದರು.