ಮೈಸೂರು:- ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ರಕ್ಷಣೆಯಾದ ಮೈಸೂರಿನ ತೋಟದ ಮನೆಯ ನೆರೆಯವರು ಪ್ರತಿಕ್ರಿಯೆ ನೀಡಿದ್ದಾರೆ.
IPL 2024: ಪ್ಲೇ ಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು ಗೊತ್ತಾ?.. ಇಲ್ಲಿದೆ ಉತ್ತರ!
ಈ ಸಂಬಂಧ ನಟೇಶ್ ಮಾತನಾಡಿ, ತಾನು ಸಂತ್ರಸ್ತೆ ಜೊತೆ ಮಾತನಾಡಿಯೂ ಇದ್ದೇನೆ ಎಂದಿದ್ದಾರೆ. ಆ ಮಹಿಳೆ ತಾನು ಎಚ್.ಡಿ. ಕೋಟೆಯವ್ರು ಅಂತ ಹೇಳಿಕೊಂಡ್ರು. ಯಜಮಾನ್ರು ತೋಟದಲ್ಲವ್ರೆ, ಅವ್ರಿಗೆ ದುಡ್ಡು ಕೊಡೋಕೆ ಬಂದಿದೀನಿ ಅಂತ ಅಂತ ಅಂದ್ರು. ಆವಕ್ಕನ ಜೊತೆ ಎರಡು ದಿನ ಮಾತನಾಡಿಸಿದೀನಿ ಎಂದು ನಟೇಶ್ ಹೇಳಿದ್ದಾರೆ.
ಎಚ್.ಡಿ. ರೇವಣ್ಣ ಸೂಚನೆ ಮೇರೆಗೆ ರಾಜಗೋಪಾಲ್ ಈ ಮಹಿಳೆಯನ್ನು ಅಪಹರಿಸಿರಬಹುದು ಎಂಬ ಶಂಕೆ ಇದೆ. ಸಂತ್ರಸ್ತೆಯನ್ನು ಎಸ್ಐಟಿ ಪೊಲೀಸರು ರಕ್ಷಣೆ ಮಾಡಿದಾಗಿನಿಂದ ರಾಜಗೋಪಾಲ್ ನಾಪತ್ತೆಯಾಗಿದ್ದಾರೆ. ಗ್ರಾಮಸ್ಥ ನಟೇಶ್ ಪ್ರಕಾರ ರಾಜಗೋಪಾಲ್ ಇಲ್ಲಿ ಬಡವರಿಗೆ ಬಹಳ ಸಹಾಯ ಮಾಡುತ್ತಾರಂತೆ. ಹಾಗೆಯೇ ರೇವಣ್ಣ ಈ ತೋಟದ ಮನೆಗೆ ಬಂದಿದ್ದನ್ನು ಒಮ್ಮೆಯೂ ನೋಡಿಲ್ಲ. ತೋಟದ ಮನೆಗೆ ಬಂದಿದ್ದ ಮಹಿಳೆ ಅತ್ಯಾಚಾರ ಸಂತ್ರಸ್ತೆ ಎಂದು ಗೊತ್ತಾಗಿದ್ದೇ ಈಗ ಎಂದು ಇವರು ಹೇಳುತ್ತಾರೆ