ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ತಣ್ಣಗಾಗ್ತಿದ್ದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಚಿಂತಕರ ಛಾವಡಿ ಎಂದೇ ಪ್ರಸಿದ್ದಿಯಾಗಿರುವ ವಿಧಾನ ಪರಿಷತ್ ಎಲೆಕ್ಷನ್ ಕಣ ರಂಗೇರ್ತಿದೆ. ವಿಧಾನ ಪರಿಷತ್ ನ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉದಯ ಸಿಂಗ್ ಕ್ಷೇತ್ರದಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ.
ಪ್ರಚಾರದಲ್ಲಿ ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದ ಉದಯ್ ಸಿಂಗ್ ಬೆಂಗಳೂರು ವ್ಯಾಪ್ತಿಗಳಲ್ಲಿ ಪದವೀಧರರು ಸ್ವಿಗ್ಗಿ, ಜೊಮೊಟೋಗಳಲ್ಲಿ ಕೆಲಸ ಮಾಡಿ 8-9 ಸಾವೀರ ದುಡಿಯುತ್ತಿದ್ದಾರೆ, ಜೈಲಲ್ಲಿರುವ ಖೈದಿಗಳು 14ರಿಂದ 15 ಸಾವಿರ ದುಡಿಯುತ್ತಿದ್ದಾರೆ ಇದು ಪದವೀಧರರ ಶೋಚನಿಯ ವಿಷಯವಾಗಿದೆ.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
ರಾಷ್ಟ್ರೀಯ ಪಕ್ಷಗಳು ಪದವೀಧರರ ಏಳಿಗೆಯನ್ನ ಗಡೆಗಣಿಸಿವೆ ಆಗಾಗಿ ಈ ಬಾರೀ ನನಗೆ ಮತ ನೀಡಿ ನಿಮ್ಮ ಪರವಾಗಿ ಧ್ವನಿಯಾಗಲು ಅವಕಾಶ ಮಾಡಿಕೊಡಿ ಎಂದರು ಇದೇ ಸಂದರ್ಭದಲ್ಲಿ ಡಾ ಆಂಜಿನಪ್ಪ, ಹುಲಿಕಲ್ ನಟರಾಜ್, ಪಿಳ್ಳ ಮೂರ್ತಿ ಸಾತ್ ನೀಡಿದರು.