ಈ ಹಿಂದೆ RCBಯ ಸತತ ಸೋಲಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಕಾರಣ ಎಂದು ಅವರ ಬಗ್ಗೆ ಕೆಟ್ಟದ್ದಾಗಿ ಕೀಳು ಮಟ್ಟದಲ್ಲಿ ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದವರಿಗೆ ಇದೀಗ RCB ಪ್ಲೇ ಆಫ್ ಗೆ ಲಗ್ಗೆ ಇಡುತ್ತಿದ್ದಂತೆ ಟಾಂಗ್ ಕೊಡಲಾಗಿದೆ.
ಏರ್ಪೋರ್ಟ್ ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿ ಪೊಲೀಸರ ಅತಿಥಿಯಾದ ಪ್ರಯಾಣಿಕ. !
ಆರ್ ಸಿ ಬಿ ಗೆಲುವಿನ ಬೆನ್ನಲ್ಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟೋ ವೈರಲ್ ಆಗಿದೆ. ದೊಡ್ಮನೆಯ ಅದೃಷ್ಟ ದೇವತೆಯಿಂದ ಪ್ಲೇ ಆಫ್ ಗೆ ಎಂಟ್ರಿ, ಅದೃಷ್ಟ ತಂದ ಹೆಣ್ಣು” ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟೋ ಹಾಕಿ ಪೋಸ್ಟ್ ಮಾಡಲಾಗಿದೆ.
ಸತತವಾಗಿ ಸೋತಾಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟೋ ಹಾಕಿ ಕಿಡಿಗೇಡಿಗಳಿಂದ ನಿಂದನೆ ಮಾಡಲಾಗಿತು. ಇದೀಗ ಸತತವಾಗಿ ಆರು ಮ್ಯಾಚ್ ಗೆದ್ದು ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದ್ದು, ಹೈವೋಲ್ಟೇಜ್ ಕದನದಲ್ಲಿ ಚೆನ್ನೈ ತಂಡವನ್ನು RCB ಬಗ್ಗು ಬಡಿದಿದೆ. ಆರ್ ಸಿ ಬಿ ಪ್ಲೇ ಆಫ್ ಎಂಟ್ರಿಯಾಗ್ತಿದ್ದಂಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಫೊಟೋ ಹಾಕಿ ಅದೃಷ್ಟ ತಂದ ಹೆಣ್ಣು ಎಂದು ಹಲವರಿಂದ ಪೋಸ್ಟ್ ಮಾಡಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)