ಹಾವೇರಿ:– ಕೇಂದ್ರದಿಂದ ಕರ್ನಾಟಕಕ್ಕೆ ಕಡಿಮೆ ಬರ ಪರಿಹಾರ ಘೋಷಿಸಿರುವ ಹಿನ್ನೆಲೆ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ “ಕೈ”ಅಭ್ಯರ್ಥಿ ಗೆಲುವು ಖಚಿತ -ಕೆರಹಳ್ಳಿ ನವೀನ್
ಇದೇ ವಿಚಾರವಾಗಿ ಹಾವೇರಿಯಲ್ಲಿ ಮಾತನಾಡಿದ ಬೊಮ್ಮಾಯಿ, ರಾಜ್ಯಕ್ಕೆ ಅನ್ಯಾಯ ಆಯಿತು, ಅನ್ಯಾಯ ಆಯಿತು ಅಂತಾರೆ ನಮ್ಮ ಕಾಲದಲ್ಲಿ ಪ್ರವಾಹ ಬಂತು. ನಾವು ತಡ ಮಾಡಲಿಲ್ಲ ಪ್ರವಾಹ ಬಂದ ತಕ್ಷಣ ಐದು, ಮೂರು ಲಕ್ಷ ಪರಿಹಾರ ಕೊಟ್ಟೆವು. ನಾವು ಕೇಂದ್ರಕ್ಕೆ ಬೊಟ್ಟು ಮಾಡಿ ಕುಳಿತುಕೊಳ್ಳಲಿಲ್ಲ. ನಮ್ಮ ಕರ್ತವ್ಯ ನಾವು ಮಾಡಿದೆವು. ಜನರ ಸಂಕಷ್ಟಕ್ಕೆ ದಾವಿಸಿ ಬರಲು ನಿಮ್ಮನ್ನು ಆಯ್ಕೆ ಮಾಡಿದ್ದಾರೆ
ರಾಜ್ಯ ದಿವಾಳಿ ಆಗಿದ್ದನ್ನು ಮುಚ್ಚಿಕೊಳ್ಳಲು ನಾಟಕ ಶುರು ಮಾಡಿದ್ದಾರೆ. ರಾಜ್ಯದ ಜನಕ್ಕೆ ಆಗಿರುವ ಅನ್ಯಾಯ ಮುಚ್ಚಿಕೊಳ್ಳಲು ನಾಟಕ. ನಾನು ಸಿಎಂ ಇದ್ದಾಗ 13600, ನೀರಾವರಿಗೆ 25 ಸಾವಿರ, ತೋಟ ಪಟ್ಟಿಗಳಿಗೆ 28 ಸಾವಿರ ಕೊಟ್ಟೆವು. ಇದು ಆಡಳಿತ ಪಕ್ಷ ಮಾಡುವ ಕೆಲಸ. ಇಷ್ಟು ದೊಡ್ಡ ರಾಜಕಾರಣ ಮಾಡಿ, ಅದರಿಂದ ಹೇಗೆ ಉದ್ದಾರ ಆಗುತ್ತದೆ. ಎಲ್ಲಾ ಜಿಲ್ಲೆಗೂ ಬರ ಪರಿಹಾರ ಕೊಡಬೇಕು. ರಾಜ್ಯ ಸರಕಾರವೂ ತನ್ನ ಪರಿಹಾರ ಕೊಡಬೇಕು. ರಾಜ್ಯ ಸರಕಾರ ತನ್ನ ಪಾಲನ್ನು ಕೊಡಬೇಕು. ೋದಿಯವರನ್ನು ಟೀಕೆ ಮಾಡುವುದು ಒಂದು ಪ್ಯಾಶನ್ ಆಗಿದೆ. ಮೋದಿ ಪೋಬಿಯಾ ಕಾಂಗ್ರೆಸ್ ನ ಸಿಎಂ ಮತ್ತು ಡಿಸಿಎಂ ಅವರಿಗಿದೆ. ಮೋದಿಯವರನ್ನು ಬೇಯ್ದರೆ ಮತ ಸಿಗುತ್ತವೆ ಎಂದು ಭಾವಿಸಿದ್ದಾರೆ. ಅವರನ್ನು ಟೀಕಿಸಿದಷ್ಟು ಅವರು ದೊಡ್ಡ ಪ್ರಮಾಣದ ಮತಗಳನ್ನು ಪಡೆದು ಎತ್ತರಕ್ಕೆ ಬೆಳೆದಿದ್ದಾರೆ. ಆಸ್ತಿ ತೆರಿಗೆ ಟ್ಯಾಕ್ಸ ಬಗ್ಗೆ ಜನರಲ್ಲಿ ಗೊಂದಲ ಇದೆ
ಈಗ ಸರ್ವೇ ಮಾಡುತ್ತೇವೆ ಅಂತಾರೆ. ಸರ್ವೇ ಅವಶ್ಯಕತೆ ಇಲ್ಲ, ಸರ್ವೇ ಮಾಡಿಸುತ್ತೇವೆ ಎಂಬುದು ಕೇವಲ ರಾಜಕೀಯ ಸ್ಟಂಟ್ ಎಂದರು. ಕಾಂಗ್ರೆಸ್ ನಾಯಕರ ಬೇನಾಮಿ ಆಸ್ತಿ ಬಗ್ಗೆ ಸರ್ವೇ ಮಾಡಬೇಕು. ಪಾಪ ಡಿಸಿಎಂವರು ಸ್ಯಾಮ್ ಪಿತ್ರೋಡಾ ಹೇಳಿಕೆ ನಮಗೆ ಸಂಬಂಧವಿಲ್ಲ ಎಂದರು
ಆದಾನಿ, ಅಂಬಾನಿ ಬೆಳೆಸಿದ್ದು ಕಾಂಗ್ರೆಸ್ ಕಾಲದಲ್ಲಿ. ಅವರು ಬೆಳೆದಾಗ ಯಾರು ಅಧಿಕಾರದಲ್ಲಿ ಇದ್ದರು. ಇಂದಿರಾಗಾಂಧಿ ಕಾಲದಲ್ಲಿ ಎಲ್ಲ ಬ್ಯಾಂಕ್ ಗಳ ರಾಷ್ಟ್ರೀಕರಣ ಆಯಿತು. ಸರಕಾರಿ ಸ್ವಾಮ್ಯದ ಕೈಗಾರಿಕಗಳನ್ನು ಮಾರಾಟ ಮಾಡಿದರು. ಖಾಸಗಿ ಬ್ಯಾಂಕ್ ಗಳು ಶುರುವಾದವು. ಕಾಂಗ್ರೆಸ್ ನ ಪಾಲಿಸಿಗಳಿಂದ ಇವೆಲ್ಲ ಆಗಿವೆ. ಮೋದಿಯವರ ಕಾಲದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಖರೋಡಪತಿಗಳಾಗಿದ್ದಾರೆ.ಸಾಮಾನ್ಯ ಜನರು ಸಹ ಖರೋಡಪತಿಗಳಾಗಿದ್ದಾರೆ
ಬಡವರನ್ನು ಶ್ರೀಮಂತರನ್ನಾಗಿ ಮಾಡುವ ಕೆಲಸ ಮೋದಿಯವರು ಮಾಡುತ್ತಿದ್ದಾರೆ. ಬೇರೆ ಯಾವ ರಾಷ್ಟ್ರವೂ ಇಷ್ಟೊಂದು ಆರ್ಥಿಕವಾಗಿ ಸದೃಢವಾಗಿಲ್ಲ. ಕಾಂಗ್ರೆಸ್ ನವರಿಗೆ ಬರ ಪರಿಹಾರ ವಿಚಾರದಲ್ಲಿ ಮಾಡುತ್ತಿರುವ ರಾಜಕೀಯದಲ್ಲಿ ಹುರುಳಿಲ್ಲ. ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ನೈಜ ವರದಿ ಕೊಟ್ಟಿದ್ದರೆ, ಇಷ್ಟು ತಡ ಆಗುತ್ತಿರಲಿಲ್ಲ. ರಾಜ್ಯ ಸರಕಾರ ಏನೇನೋ ಬೇಕು ಅದನ್ನು ಕೊಡುವುದಿಲ್ಲ. ಮನವಿ ಕೊಟ್ಟಿದ್ದೇ ವೇದ ವಾಕ್ಯವಲ್ಲ. ಬರ ಪರಿಹಾರ ಬರುವುದು ತಡ ಆಗಿಯೇ ಇಲ್ಲ. 3500 ಕೋಟಿಗೆ 3500 ಕೋಟಿ ಸೇರಿಸಿದಾಗ ನನಗೆ ತೃಪ್ತಿ ಆಗುತ್ತದೆ ಎಸ್ ಡಿಆರ್ ಎಫ್ ಫಂಡ್ ರೆಗ್ಯೂಲರ್ ಆಗಿ ಬರುತ್ತದೆ. ಎನ್ ಡಿ ಆರ್ ಎಫ್ ಎಲ್ಲವನ್ನೂ ಗಮನಿಸಿ ಬರುತ್ತದೆ. ಕಾಂಗ್ರೆಸ್ ನವರಿಗೆ ಬದ್ಧತೆ ಇದ್ದರೆ, ಖಜಾನೆಯಲ್ಲಿ ದುಡ್ಡಿದ್ದರೆ ಕೇಂದ್ರದವರು ಕೊಟ್ಟಷ್ಟು ರಾಜ್ಯದವರು ಕೊಡಬೇಕು. ಪ್ರವಾಹದಲ್ಲಿ ನಾವು ಕೊಟ್ಟ ಎರಡರಷ್ಟು ಹಣದಿಂದ ಬಹಳ ಅನುಕೂಲ ಆಗಿದೆ
ಮೇ 1 ರಂದು ಅಮೀತ್ ಶಾ ರಾಣೆಬೆನ್ನೂರಿಗೆ ಬರ್ತಾರೆ. ಎಪ್ರೀಲ್ 30ಕ್ಕೆ ನಡ್ಡಾ ಕಾಗಿನೆಲೆಗೆ ಬರ್ತಾರೆ. ನಡ್ಡಾ ದೇವರ ದರ್ಶನ ಮಾಡಿ ಪ್ರಮುಖರ ಭೇಟಿಯಾಗಿ ಮೋಟೆಬೆನ್ನೂರಲ್ಲಿ ರೋಡ್ ಶೋ ಮಾಡ್ತಾರೆ. ನಾಳೆ ಪ್ರತಾಪ ಸಿಂಹ, ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ತಾರಾ ಲಕ್ಷ್ಮೇಶ್ವರ ಮತ್ತು ರೋಣದಲ್ಲಿ ಪ್ರಚಾರ ಮಾಡಲಿದ್ದಾರೆ. 2000 ರೂಪಾಯಿ ಹಾಕಲು ನೆಪ ಹೇಳಿದ್ದರು. ಈಗಲೂ ಅದನ್ನೆ ಮಾಡುತ್ತಾರೆ, ಅದು ಆಗಬಾರದು. ತಕ್ಷಣವೇ ತಮ್ಮ ಪಾಲನ್ನೂ ಸೇರಿಸಿ ರಾಜ್ಯ ಸರಕಾರ ಪರಿಹಾರ ಕೊಡಬೇಕು. ಮೊದಲ ಹಂತದ ಚುನಾವಣೆಯಲ್ಲಿ 14ಕ್ಕೆ 14ರಲ್ಲೂ ಬಿಜೆಪಿ ಬರುತ್ತದೆ. ಎಲ್ಲೋ ಒಂದು ಕಡೆ ಏನಾದರೂ ಆಗಬಹುದು. ಚುನಾವಣೆ ಸಮಯದಲ್ಲಿ ಏನಾದರೂ ಲಾಭ ಆಗಬಹುದು ಅಂತಾ ಮೀಸಲಾತಿ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)