ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ನೆರವೇರಿದೆ. ಆರಾಧ್ಯ ದೈವ ರಾಮಜನ್ಮ ಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನನ್ನ ಕಣ್ತುಂಬಿಕೊಂಡು ಕೋಟ್ಯಂತರ ಭಕ್ತರು ಧನ್ಯರಾಗಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ರಾಮಮಂದಿರ ಉದ್ಘಾಟನೆ ವಿಜಯದ ಇಡೀ ದೇಶಾದ್ಯಂತ ನೆಲೆಸಿರುವ ರಾಮಭಕ್ತರು,
Ram Mandir: ಅಯೋಧ್ಯಾ ನಗರಿಯಲ್ಲಿ ವಿರಾಜಮಾನನಾದ ಬಾಲರಾಮ: ಹಿಂದೂಗಳ ಕನಸು ನನಸು!
ಪ್ರತಿ ಮನೆ-ಮನೆಗಳಲ್ಲಿ ರಾಮಜ್ಯೋತಿ ಬೆಳಗಿಸಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ಖ್ಯಾತ ನಟ-ನಟಿಯರು ರಾಮ ಜ್ಯೋತಿ (Ram Jyoti) ಬೆಳಗಿಸುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ದೀಪ ಬೆಳಗಿಸುವ ಮೂಲಕ ದೇಶದ ಜನರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು:
ಅಯೋಧ್ಯೆಯ ಸರಯೂ ನದಿ ತೀರದ ರಾಮ್ ಕಿ ಪಾಡಿಯಲ್ಲಿ ಸರಿಸುಮಾರು 10 ಲಕ್ಷ ದೀಪ ಬೆಳಗುತ್ತಿದ್ದು, ಇದರ ನಡುವೆ ಲೇಸರ್ ಲೈಟ್ ಶೋಗಳೂ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ. ಇದರೊಂದಿಗೆ ಕರ್ನಾಟಕ ದಲ್ಲಿಯೂ ಶ್ರೀರಾಮನ ಭಕ್ತರು ತಮ್ಮ ಮನೆಗಳಲ್ಲಿ, ಬೀದಿಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ದೀಪೋತ್ಸವ ನೆರವೇರಿಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜ.22ರಂದು ಪ್ರತಿ ಮನೆ ಮನೆಗಳಲ್ಲೂ ರಾಮ ಜ್ಯೋತಿ ಬೆಳಗಿಸುವಂತೆ ಕರೆ ನೀಡಿದ್ದರು. ಹೊಸ ಯುಗದ ಆಗಮನದ ಸಂಕೇತವಾಗಿ ಸಂಜೆ ನಿಮ್ಮ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸಿ ಶ್ರೀರಾಮನಲ್ಲಿ ಪ್ರಾರ್ಥಿಸಿ ಎಂದು ಕರೆ ನೀಡಿದ್ದರು.